ಮಂಡಿಯ ಅತ್ಯಂತ ಪ್ರಸಿದ್ಧ ಹಾಗೂ ಜನಪ್ರಿಯ ಧಾರ್ಮಿಕ ಕೇಂದ್ರ ಭೀಮಾ ಕಾಳಿ. ಇದು ಬಿಯಸ್ ನದಿಯ ದಡದ ಮೇಲಿದೆ. ಈ ದೇಗುಲವು ಭೀಮಕಾಳಿ ದೇವಿಗೆ ಮೀಸಲಾಗಿದೆ. ಮಂಡಿಯ ಭುಷಾಹರ ಅರಸರ ಕುಟುಂಬ ದೇವತೆ ಇವಳು. ಅತ್ಯಾಕರ್ಷಕ ವಾಸ್ತುಶಿಲ್ಪದಿಂದ ದೇಗುಲ ಕಂಗೊಳಿಸುತ್ತಿದೆ. ಇದು ಸಾಕಷ್ಟು ಪ್ರಮಾಣದ ಹಿಂದು ದೇವರು ಹಾಗೂ ದೇವತೆಗಳ ಮೂರ್ತಿಯನ್ನು ಹೊಂದಿದ್ದು, ಅದನ್ನು ವೀಕ್ಷಕರಿಗೆ ವಸ್ತು ಸಂಗ್ರಹಾಲಯದ ರೂಪದಲ್ಲಿ ದರ್ಶನಕ್ಕಿಡಲಾಗಿದೆ. ಪುರಾಣಗಳ ಪ್ರಕಾರ, ಹಿಂದು ದೇವರಾದ ಕೃಷ್ಣನು ಅಸುರ ಬಾಣಾಸುರನ ವಿರುದ್ಧ ಘೋರ ಯುದ್ಧವನ್ನು ಮಾಡಿದ. ಯುದ್ಧದಲ್ಲಿ ಸತ್ತ ಅಸುರನ ತಲೆಯನ್ನು ಇದೇ ನೆಲದಲ್ಲಿ ಹೂಳಲಾಯಿತು ಎಂದು ಹೇಳಲಾಗುತ್ತದೆ.
ಈ ದೇಗುಲವನ್ನು ಯಾದವ ಅರಸರು ನಿರ್ಮಿಸಿದ್ದಾರೆ. ಈ ದೇಗುಲದ ಮೇಲೆ ನಿಂತು ನೋಡಿದರೆ ಅತ್ಯಾಕರ್ಷಕ ಶಿಖಾನಂದ ಬೆಟ್ಟದ ತಪ್ಪಲು ಸುಂದರವಾಗಿ ಗೋಚರಿಸುತ್ತದೆ. ಸಾವಿರಾರು ಭಕ್ತರು ಪ್ರತಿವರ್ಷ ಕಾಳಿ ಪೂಜೆ ಸಂದರ್ಭದಲ್ಲಿ ಈ ದೇವಾಲಯಕ್ಕೆ ಆಗಮಿಸುತ್ತಾರೆ.