ಕರ್ನಾಟಕದಾದ್ಯಂತ ಸಂತ ಮೇರಿಯ ದ್ವೀಪವು ಕೊಕೊನಟ್ ದ್ವೀಪವೆಂದೆ ಹೆಸರುವಾಸಿಯಾಗಿದ್ದು, ಉಡುಪಿಯಲ್ಲಿರುವ ಮಲ್ಪೆ ಬೀಚಿನ ಸನಿಹದಲ್ಲಿದೆ. ಈ ದ್ವೀಪವು ಅನನ್ಯವಾದ ಕೊಲ್ಯುಮ್ನಾರ ಬ್ಯಾಸಾಲಿಟಿಕ್ ಲಾವಾ ರಚನೆಯನ್ನು ಹೊಂದಿದೆ. ಈ ದ್ವೀಪವು ಭಾರತದಲ್ಲಿರುವ 26 ಭೂಗರ್ಭ ಶಾಸ್ತ್ರದ ಸ್ಮಾರಕಗಳಲ್ಲಿ ಒಂದಾಗಿದೆ.ಪೋರ್ಚುಗೀಸ್ ಯಾತ್ರಿಕ ವಾಸ್ಕೊ-ಡ-ಗಾಮಾನು ಕೇರಳದ ಕಪ್ಪಾಡ್ ತಲುಪುವ ಮುಂಚೆ ಇಲ್ಲಿ ಇಳಿದಿದ್ದನು. ಪ್ರಸ್ತುತ ಈ ದ್ವೀಪವು ಯಾವುದೆ ಕಟ್ಟಡಗಳಿಲ್ಲದೆ ನಿರ್ಜನವಾಗಿದ್ದು, ಅಲ್ಲಲ್ಲಿ ಕೆಲವು ಪಾರ್ಕ್ ಬೆಂಚ್ ಗಳನ್ನು ಕಾಣಬಹುದಾಗಿದೆ.ಮಂಗಳೂರು ವಿಮಾನ ನಿಲ್ದಾಣವು ಈ ದ್ವೀಪಕ್ಕೆ ಹತ್ತಿರವಾಗಿದ್ದು 58 ಕಿ.ಮೀ ದೂರದಲ್ಲಿದೆ. "ಫೆರ್ರಿ" ಒಂದು ರೀತಿಯ ದೋಣಿಯ ಮೂಲಕ ಪ್ರವಾಸಿಗರು ಈ ದ್ವೀಪವನ್ನು ತಲುಪಬಹುದಾಗಿದೆ. ಮಲ್ಪೆ ಬಂದರಿನಿಂದ ಈ ಸೇವೆಯನ್ನು ಪಡೆಯಬಹುದಾಗಿದೆ. ಮಲ್ಪೆಯು ಉಡುಪಿ ನಗರದಿಂದ ಕೇವಲ 4 ಕಿ.ಮೀ ದೂರದಲ್ಲಿದ್ದು ರಸ್ತೆ ಸಾರಿಗೆಯ ಮೂಲಕ ಸರಳವಾಗಿ ತಲುಪಬಹುದು. ಆದರೆ ಫೆರ್ರಿ ಸೇವೆಯು ಪ್ರಯಾಣಿಕರ ಸಂಖ್ಯೆಯ ಮೇಲೆ ಅವಲಂಬಿತವಾಗಿದೆ.