ನವ ಮುಕುಂದ ಕ್ಷೇತ್ರಂ ಎಂದು ಸಹ ಕರೆಯಲ್ಪಡುವ ತಿರುನವಯ ದೇವಾಲಯವು ಬೃಹತ್ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿರುವ ಪುರಾತನ ದೇಗುಲ. ಭಾರತಪುಳಾ ನದಿಯ ದಡದ ಮೇಲಿರುವ ಈ ದೇವಾಲಯವು ತನ್ನ ಚಿತ್ರಸದೃಶ ದೃಶ್ಯಗಳಿಂದ ಕೇರಳದಾದ್ಯಂತ ಭಕ್ತರನ್ನು ಸೆಳೆಯುತ್ತಿದೆ. ಇದು ತಿರುನವಯ ಎಂಬ ಚಿಕ್ಕ ಗ್ರಾಮದಲ್ಲಿದ್ದು, ಪ್ರಖ್ಯಾತ ಮಮಂಕಂ ಉತ್ಸವದಿಂದಾಗಿ ಕೇರಳದ ಪುರಾತನ ಇತಿಹಾಸದಲ್ಲಿ ಗುರುತಿಸಿಕೊಂಡಿದೆ.
ಈ ದೇವಾಲಯದಲ್ಲಿ ಭಗವಾನ ವಿಷ್ಣುವನ್ನು ನವ ಮುಕುಂದನ್ ಎಂದು ಪೂಜಿಸಲಾಗುತ್ತದೆ. ಗಣೇಶ ಮತ್ತು ಲಕ್ಷ್ಮಿ ದೇವಿಯ ಉಪ ಗೋಪುರಗಳನ್ನೂ ದೇವಾಲಯದ ಸಂಕೀರ್ಣದ ಒಳಗೆ ಕಾಣಬಹುದು. ದೇವಾಲಯವು ಪ್ರಾಚೀನ ಕಾಲದ ವೈದಿಕ ಶಿಕ್ಷಣ ಕೇಂದ್ರವಾಗಿತ್ತೆಂದೂ ದಕ್ಷಿಣ ಭಾರತದ ಎಲ್ಲ ವಿದ್ವಾಂಸರು ಈ ಸ್ಥಳಕ್ಕೆ ಭೇಟಿ ನೀಡುತ್ತಿದ್ದರೆಂದು ನಂಬಲಾಗಿದೆ. ಮೈಸೂರಿಗರ ಆಕ್ರಮಣದ ಅವಧಿಯಲ್ಲಿ, ಟಿಪ್ಪು ಸುಲ್ತಾನ್ ನ ಸೈನ್ಯವು ದೇವಾಲಯವನ್ನು ಧ್ವಂಸಮಾಡಿ ಅಲ್ಲಿದ್ದ ಸಂಪತ್ತನ್ನು ಲೂಟಿ ಮಾಡಿದರು ಆದರೆ ನಂತರದ ದಿನಗಳಲ್ಲಿ ದೇವಾಲಯವು ತನ್ನ ವೈಭವವನ್ನು ಮರಳಿ ಪಡೆಯಿತು. ತಿರೂರ್ ಪಟ್ಟಣದಿಂದ 8 ಕಿಮೀ ದೂರದಲ್ಲಿರುವ ತಿರುನವಯ ದೇವಾಲಯವನ್ನು ರಸ್ತೆಯ ಮಾರ್ಗವಾಗಿ ಸುಲಭವಾಗಿ ತಲುಪಬಹುದು.