ಕೇರಳದೇಶಪುರಂ ದೇವಸ್ಥಾನ, ದಕ್ಷಿಣ ಭಾರತದ ಪ್ರಾಚೀನ ಮತ್ತು ಐತಿಹಾಸಿಕ ಹಿಂದೂ ದೇವಸ್ಥಾನವಾಗಿದ್ದು ,ತನುರ್ ಪಟ್ಟಣದಿಂದ 3 ಕಿಮೀ ದೂರದಲ್ಲಿದೆ. ಇದು ಮಲಪ್ಪುರಂ ಜಿಲ್ಲೆಯ ಕರಾವಳಿ ಪಟ್ಟಣ. ತನುರ್ ಪೋರ್ಚುಗೀಸರ ಪುರಾತನ ವಸಾಹತುಗಳಲ್ಲೋಂದು ಎಂದು ಹೇಳಲಾಗುತ್ತದೆ.
ಇದು ಭಗವಾನ ವಿಷ್ಣುವಿನ ದೇವಾಲಯವಾಗಿದ್ದು, ಹದಿನಾರನೇ ಶತಮಾನದ ಮಧ್ಯಾವಧಿಯಲ್ಲಿ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ನು ಇಲ್ಲಿಗೆ ಭೇಟಿನೀಡಿದ್ದನೆಂಬ ಇತಿಹಾಸವನ್ನು ಹೊಂದಿದೆ. ಮೈಸೂರಿನ ಟಿಪ್ಪು ಸುಲ್ತಾನನಿಂದ ನಾಶವಾದ ದೇವಾಲಯದವನ್ನು ಮರುನಿರ್ಮಿಸಲಾಗಿದ್ದು ದೇವಾಲಯದ ಇಂದಿನ ವಿನ್ಯಾಸವು ನವೀಕರಣಗೊಂಡದ್ದಾಗಿದೆ.
ಕೇರಳದೇಶಪುರಂ ದೇವಸ್ಥಾನವು ತನುರ್ ಸಮುದ್ರತೀರದ ಸಮೀಪದಲ್ಲಿದ್ದು ಭೇಟ ನೀಡುವವರಿಗೆ ಒಂದು ಪ್ರಶಾಂತ ಪರಿಸರವನ್ನು ಒದಗಿಸುತ್ತದೆ. ದೇವಾಲಯದ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದು ಗೋಡೆಗಳ ಮೇಲೆ ಚಿತ್ರಿಸಲಾದ ಗಮನಾರ್ಹ ಮ್ಯೂರಲ್ ವರ್ಣಚಿತ್ರಗಳು. ದೇವಾಲಯದ ಮುಖ್ಯ ವಾರ್ಷಿಕ ಹಬ್ಬವು ವ್ರಿಶ್ಚಿಕಂ ಎಂಬ ಮಲಯಾಳಂ ತಿಂಗಳಲ್ಲಿ ಜರುಗುತ್ತದೆ. ತ್ರಿಕ್ಕೈಕಟ್ಟು ದೇವಾಲಯ ಮತ್ತು ಮಠ, ಶೋಭಾ ಪರಂಬು ದೇವಿ ದೇವಸ್ಥಾನ ಮತ್ತು ವೆಟ್ಟಕ್ಕೊರುಮಕನ್ ದೇವಾಲಯ ಇವೇ ಮೊದಲಾದವು ಪಟ್ಟಣದ ಇತರ ಜನಪ್ರಿಯ ತಾಣಗಳಾಗಿವೆ.