ಪವಿತ್ರ ನರ್ಮದ ನದಿಯ ಉತ್ತರದ ತೀರದಲ್ಲಿ ಈ ಕಾಲೇಶ್ವರ ದೇವಸ್ಥಾನವು ನೆಲೆಗೊಂಡಿದೆ. ಈ ದೇವಾಲಯವನ್ನು ಕ್ರಿ.ಶ 12 ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಈ ದೇವಸ್ಥಾನದಲ್ಲಿ ಶಿವನನ್ನು ಪೂಜಿಸಲಾಗುತ್ತದೆ. ಈ ದೇವಾಲಯದಲ್ಲಿ ಶಿವನನ್ನು ಪ್ರಳಯ ಮತ್ತು ವಿನಾಶ ಸ್ವರೂಪನಾದ ಕಾಲೇಶ್ವರನ ಅವತಾರದಲ್ಲಿ ಆರಾಧಿಸಲಾಗುತ್ತದೆ. ಕಾಲೇಶ್ವರ ಈ ಅದ್ಭುತವಾದ ದೇವಾಲಯವು ಎತ್ತರದ ವೇದಿಕೆಯ ಮೇಲೆ ಸ್ಥಿತಗೊಂಡಿದ್ದು, ಕೆಂಪು ವರ್ಣದಿಂದ ಪಳಪಳನೇ ಹೊಳೆಯುತ್ತಿದೆ.
ಪ್ರವಾಸಿಗರಿಗೆ ಈ ದೇವಸ್ಥಾನದಲ್ಲಿ ಅದ್ಬುತವಾದಂತಹ ಲಂಬ ಪ್ರಕ್ಷೇಪಯುಳ್ಳ ಮೇಲ್ಮುಖವಾದ ಸುರುಳಿ ಗೊಮ್ಮಟಗಳು ಕಾಣ ಸಿಗುತ್ತವೆ. ಕಾಲೇಶ್ವರ ದೇವಾಲಯವು ಹಸಿರು ಸಮೃದ್ಧಿಯಿಂದ ಕೂಡಿದು ಕಣ್ಣಿಗೆ ಹಿತವೆನಿಸುವ ವಾತಾವರಣವನ್ನು ಹೊಂದಿದೆ. ಇದು ಭಕ್ತರಲ್ಲಿ ತೀವೃವಾದ ಆದ್ಯಾತ್ಮಿಕತೆ ಮತ್ತು ಭಕ್ತಿ ಪರವಶತೆಯ ಭಾವನೆಗಳನ್ನು ತಂದು ಅವರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ಈ ದೇವಾಲಯದಲ್ಲಿ ಶಿವನ ವಿನಾಶಕಾರಿ ಪುನರ್ಜನ್ಮ ಅಥವಾ ಅವತಾರದ ಸ್ವರೂಪವನ್ನು ಆರಾಧಿಸಲಾಗುತ್ತದೆ.
ಮಹೇಶ್ವರದಲ್ಲಿರುವ ಎಲ್ಲ ದೇವಾಲಯಗಳಿಗಿಂತಲೂ ಈ ಕಾಲೇಶ್ವರ ದೇವಾಲಯವು ಬಹು ವಿಭಿನ್ನವಾಗಿ, ವಿಶಿಷ್ಟವಾಗಿ ನಿಲ್ಲುತ್ತದೆ. ಈ ದೇವಸ್ಥಾನವನ್ನು ಸುತ್ತುವರೆದಿರುವ ಸಮೃದ್ಧ ಹಸಿರು ವಾತಾವರಣ ಮತ್ತು ದೇವಾಲಯದ ಒಳಾಂಗಣ ವಿನ್ಯಾಸವು ಪ್ರವಾಸಿಗರನ್ನು ಆಕರ್ಷಿಸುವ ಸಂಪೂರ್ಣ ಪ್ರಯತ್ನವನ್ನು ಮಾಡುತ್ತವೆ.