ಭಾಂಹಿನಿ ಹಳ್ಳಿಯಲ್ಲಿರುವ ಸ್ವೇತ್ ಗಂಗಾ ಮಹಾಸಮುಂದಿನಿಂದ 10 ಕಿ.ಮೀ. ದೂರದಲ್ಲಿದೆ. ನೀರಿನ ಚಿಲುಮೆಯಿಂದ ನಿರಂತರವಾಗಿ ನೀರು ನದಿಗೆ ಹರಿಯುತ್ತಿರುತ್ತದೆ. ಈಶ್ವರನ ಪುರಾತನ ದೇವಾಲಯವೊಂದು ಇಲ್ಲಿಗೆ ಹತ್ತಿರವೇ ಇದೆ. ಶ್ರಾವಣ ಮಾಸದಲ್ಲಿ ಇಲ್ಲಿ ಹಬ್ಬವನ್ನು ಆಚರಿಸುತ್ತಾರೆ. ಆ ಸಮಯದಲ್ಲಿ ದೊಡ್ಡಸಂಖ್ಯೆಯಲ್ಲಿ ಭಕ್ತರು ಇಲ್ಲಿರುವ ಚಿಲುಮೆಯಿಂದ ನೀರನ್ನು ತೆಗೆದುಕೊಂಡು ಗಾಂಡೇಶ್ವರ್ ಮಹಾದೇವ್ ದೇವಾಲಯದಲ್ಲಿರುವ ಶಿವ ಲಿಂಗದ ಅಭಿಶೇಕಕ್ಕೆ ಅರ್ಪಿಸುತ್ತಾರೆ. ಈ ಭಕ್ತರ ಗುಂಪನ್ನು ಕನ್ವಾರಿಯಾಗಳೆಂದು ಕರೆಯುತ್ತಾರೆ.