ಪ್ರತಾಪ್ ಗಡ್ ಕೋಟೆ ಮಹಾಬಲೇಶ್ವರದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. 1856 ರಲ್ಲಿ ಸ್ಥಾಪನೆಯಾದ ಈ ಪ್ರಸಿದ್ಧ ಕೋಟೆ, ಒಂದು ಪರಿಚಿತ ಹೆಸರನ್ನು ನೆನಪಿಸುವಂತೆ ಮಾಡುತ್ತದೆ. ಮಹಾಬಲೇಶ್ವರದಿಂದ 20 ಕಿಮೀ ದೂರವಿರುವ ಈ ಕೋಟೆಯನ್ನು ಛತ್ರಪತಿ ಶಿವಾಜಿ ಮಹಾರಾಜರ ಆದೇಶದ ಮೇರೆಗೆ ನಿರ್ಮಿಸಲಾಯಿತು.
ಉರುಲು ಬಾಗಿಲುಗಳು ಮತ್ತು ದೊಡ್ಡ ಕೋಣೆಗಳ ಜೊತೆ ಹೇರಳವಾದ, ಈ ಸ್ಥಳವು ಅಫ್ಜಲ್ ಖಾನ್ ನ ಸಾವಿನ ವಿಷಯ ಕುರಿತು ಮಹತ್ವವುಳ್ಳದ್ದಾಗಿದೆ. ಇದು ಖಾನ್ ಸಮಾಧಿ ಹಾಗೂ ಪ್ರಸಿದ್ಧ ಭವಾನಿ ದೇವಸ್ಥಾನವನ್ನು ಹೊಂದಿದೆ. ಅಲ್ಲದೆ ಸಮೀಪದಲ್ಲೆ ಒಂದು ಶಿವ ದೇವಾಲಯವೂ ಇದೆ.
ದೂರದಿಂದ ಕೋಟೆ ಎತ್ತರವು, ದುಂಡಾಗಿರುವ ಬೆಟ್ಟದ ರೀತಿ ಕಾಣುತ್ತದೆ. ಇದು ಸಮುದ್ರ ಮಟ್ಟದಿಂದ 1000 ಮೀ ಎತ್ತರದಲ್ಲಿ ಇದೆ.