Search
  • Follow NativePlanet
Share
ಮುಖಪುಟ » ಸ್ಥಳಗಳು» ಮದನಪಲ್ಲಿ

ಕೌತುಕಗಳ ತಾಣ ಮದನಪಲ್ಲಿ

10

ಆಂಧ್ರದ ಚಿತ್ತೂರು ಜಿಲ್ಲೆಯ ಸಣ್ಣ ಪುರಸಭಾ ಪಟ್ಟಣವಾದ ಮದನಪಲ್ಲಿ ಹೆಸರಿನ ಹುಟ್ಟಿಗೆ ಅದೆಷ್ಟೋ ಕಥೆಗಳಿವೆ. ಆದರೆ, ಪ್ರಾಚೀನ ಕಾಲದಲ್ಲಿ ಈ ಪ್ರದೇಶ ಮರ್ಯಾದಾ ರಾಮಣ್ಣ ಪಟ್ಟಣಮ್ ಎಂದು ಕರೆಯಲ್ಪಡುತ್ತಿತ್ತು ಎಂಬ ಕಥೆಗೆ ಪುಷ್ಠಿ ನೀಡುವ ಅಂಶಗಳೇ ಹೆಚ್ಚಿವೆ. 19 ನೇ ಶತಮಾನದ ಅಂತ್ಯದ ವೇಳೆಗೆ ಈ ಪ್ರದೇಶವನ್ನು ಮದನಪಲ್ಲಿ ಎಂದು ಮರುನಾಮಕರಣ ಮಾಡಲಾಗಿದೆ.

ದೇಶದ ಅತಿ ದೊಡ್ಡ ಆದಾಯ ವಿಭಾಗ ಪ್ರದೇಶವೆಂಬ ಹೆಗ್ಗಳಿಕೆ ಹೊಂದಿದೆ. ಚಿತ್ತೂರು ಜಿಲ್ಲೆಯ ಅರ್ಧದಷ್ಟು ವ್ಯಾಪ್ತಿ ವಿಸ್ತಾರವನ್ನು ಮದನಪಲ್ಲಿ ಹೊಂದಿದೆ. ಅಲ್ಲದೇ, ಮದನಪಲ್ಲಿ ಪ್ರಮುಖ ಕೃಷಿ ಚಟುವಟಿಕೆಗಳ ತಾಣವಾಗಿ ಅತಿ ವೇಗವಾಗಿ ಅಭಿವೃದ್ಧಿಯಾಗುತ್ತಿರುವುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಉತ್ತಮ ಗುಣಮಟ್ಟದ ತರಕಾರಿ, ಹಣ್ಣುಗಳನ್ನು ಬೆಳೆಯಲು ಮದನಪಲ್ಲಿಯ ಭೂಪ್ರದೇಶ ಸಮೃದ್ಧವಾಗಿದೆ. ಅದರಲ್ಲೂ, ಇಲ್ಲಿ ಬೆಳೆಯುವ ಟೋಮ್ಯಾಟೋಗಳ ರುಚಿಯೇ ಬೇರೆ.

ರೈಲು ನಿಲ್ದಾಣವನ್ನು ಹೊಂದಿರುವ ಮದನಪಲ್ಲಿ ಪಟ್ಟಣದಲ್ಲಿ ಹಾರ್ಸ್‌ಲಿ ಬೆಟ್ಟ ಪ್ರವಾಸಿಗರ ಪ್ರಮುಖ ಆಕರ್ಷಣೆ. ಆಂಧ್ರದ ಸುಡು ಬಿಸಿಲಿನಲ್ಲೂ ಹಿತಕರ ವಾತಾವರಣ ನೀಡುವುದೇ ಈ ಬೆಟ್ಟಗಳ ವೈಶಿಷ್ಟ್ಯ. ಹೀಗಾಗಿ, ಸ್ಥಳೀಯರಲ್ಲಿ ಹಾರ್ಸ್‌ಲಿ ಬೆಟ್ಟಗಳು ಬೇಸಿಗೆಯ ರೆಸಾರ್ಟ್ ಎಂದೇ ಚಿರಪರಿಚಿತ. ಆನಿ ಬೆಸೆಂಟ್ ನಂತರ ಬೇಸಂಟ್ ಥಿಯೋಸೊಫಿಕಲ್ ಕಾಲೇಜು ಮದನಪಲ್ಲಿಯ ಮತ್ತೊಂದು ವೈಶಿಷ್ಟ್ಯ.

ಜಿದ್ದು ಕೃಷ್ಣಮೂರ್ತಿಯ ಹುಟ್ಟೂರು

ಪ್ರಸಿದ್ಧ ತತ್ವಜ್ಞಾನಿ ಹಾಗೂ ರಿಷಿ ವ್ಯಾಲಿ ಶಾಲೆಯ ಸ್ಥಾಪಕ ಜಿದ್ದು ಕೃಷ್ಣಮೂರ್ತಿಯ ಹುಟ್ಟೂರು ಮದನಪಲ್ಲಿ. ಪ್ರದೇಶದಲ್ಲಿನ ಕೃಷ್ಣಮೂರ್ತಿ ಅವರ ನಿವಾಸ  ಸ್ಥಳೀಯರಿಗೆ ಒಂದು ರೀತಿ ಪವಿತ್ರ ಸ್ಥಳವಾಗಿ ಮಾರ್ಪಟ್ಟಿದೆ.

ರಾಷ್ಟ್ರೀಯ ಪ್ರಾಮುಖ್ಯತೆಯ ತಾಣ:

ಮೂಲಗಳ ಪ್ರಕಾರ, ನಮ್ಮ ರಾಷ್ಟ್ರಗೀತೆಯನ್ನು ರವೀಂದ್ರನಾಥ ಟಾಗೂರರು ಬಂಗಾಲಿ ಭಾಷೆಯಿಂದ ಇಂಗ್ಲಿಷ್‌ಗೆ ಅನುವಾದವಾದ ಮಾಡಿದ್ದು, ರಾಗ ಸಂಯೋಜಿಸಿದ್ದು ಇದೇ ಮದನಪಲ್ಲಿಯಲ್ಲಿ ಅಂತೆ.   

ಹವಾಮಾನ

ಚಳಿಗಾಲ ಹೊರತುಪಡಿಸಿದರೆ, ವರ್ಷದ ಬಹುತೇಕ ತಿಂಗಳುಗಳಲ್ಲಿ ಈ ಪ್ರದೇಶದ ವಾತಾವರಣ ಬಿಸಿಲು, ತಾಪಮಾನದಿಂದಲೇ ಕೂಡಿರುತ್ತದೆ. ಹೀಗಾಗಿ, ಚಳಿಗಾಲದಲ್ಲಿ ಪ್ರವಾಸ ಕೈಗೊಳ್ಳುವುದು ಸೂಕ್ತ. ಪಟ್ಟಣಕ್ಕೆ ಉತ್ತಮ ಸಂಪರ್ಕ ವ್ಯವಸ್ಥೆ ಇದ್ದು, ರಸ್ತೆ ಅಥವಾ ರೈಲುಮಾರ್ಗವಾಗಿ ತಲುಪಬಹುದು. ಮದನಪಲ್ಲಿಯಿಂದ ತಿರುಪತಿಗೆ 115 ಕಿ.ಮೀ, ಬೆಂಗಳೂರಿಗೆ 157 ಕಿ.ಮೀ, ಚಿತ್ತೂರಿಗೆ 93 ಕಿ.ಮೀ, ಪುಟ್ಟಪರ್ತಿಗೆ 125 ಕಿ.ಮೀ.ನಷ್ಟು ದೂರ ಪ್ರಯಾಣಿಸಬೇಕಾಗುತ್ತದೆ.

ಮದನಪಲ್ಲಿ ಪ್ರಸಿದ್ಧವಾಗಿದೆ

ಮದನಪಲ್ಲಿ ಹವಾಮಾನ

ಉತ್ತಮ ಸಮಯ ಮದನಪಲ್ಲಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಮದನಪಲ್ಲಿ

  • ರಸ್ತೆಯ ಮೂಲಕ
    ಮದನಪಲ್ಲಿಯಿಂದ ಹೈದರಾಬಾದ್‌, ವೈಜಾಗ್‌ ಮತ್ತು ರಾಜ್ಯದ ಇತರ ಭಾಗಗಳಿಗೆ ನಿರಂತರವಾಗಿ ರಾಜ್ಯ ಸರ್ಕಾರಿ ಬಸ್‌ ವ್ಯವಸ್ಥೆಯಿದೆ. ತಮಿಳುನಾಡು ಹಾಗೂ ಕರ್ನಾಟಕಗಳಿಂದ ಕೂಡ ಖಾಸಗಿ ಮತ್ತು ಸರ್ಕಾರಿ ಬಸ್ ಸೌಲಭ್ಯವಿದೆ. ಪ್ರತಿನಿತ್ಯವೂ ಬೆಂಗಳೂರು ಹಾಗೂ ಚೆನ್ನೈಗಳಿಂದ ವೋಲ್ವೋ ಬಸ್‌ ಸಂಚರಿಸುತ್ತಿದ್ದು, ನಿಮ್ಮ ಪ್ರಯಾಣ ಮತ್ತಷ್ಟು ಆರಾಮದಾಯಕವಾಗಿರಲಿದೆ. ಉತ್ತಮ ಬಸ್‌ ವ್ಯವಸ್ಥೆ ಇರುವುದಕ್ಕಾಗಿಯೇ ಮದನಪಲ್ಲಿಗೆ ತೆರಳಲು ಹೆಚ್ಚಿನ ಜನ ರಸ್ತೆ ಮಾರ್ಗವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಧರ್ಮಾವರಂ ಮತ್ತು ಚಿತ್ತೂರಿಗೆ ಸಾಗುವ ರೈಲುಗಳು ಮದನಪಲ್ಲಿಯ ಮೂಲಕವೇ ಸಾಗುತ್ತವೆ. ನಗದರ ಹೃದಯಭಾಗದಿಂದ 13 ಕಿಲೋಮೀಟರುಗಳಷ್ಟು ಅಂತರದಲ್ಲಿರುವ ಮದನಪಲ್ಲಿ ರೈಲು ನಿಲ್ದಾಣ ನಿಮಗೆ ಉತ್ತಮ ಸಾರಿಗೆ ಅನುಭವವನ್ನು ನೀಡುತ್ತದೆ. ರೈಲು ನಿಲ್ದಾಣದಿಂದ ಹೊರಬಿದ್ದ ಬಳಿಕ ಖಾಸಿಗಿ ಹಾಗೂ ಸರ್ಕಾರಿ ಬಸ್‌ ಸೌಲಭ್ಯವಿದೆ. ಗುಂಟ್ಕಲ್‌, ಪಕಳ ಹಾಗೂ ಬಳ್ಳಾರಿ ನಡುವೆ ಸಂಚರಿಸುವ ಪ್ಯಾಸೆಂಜರ್‌ ರೈಲುಗಳೂ ಕೂಡ ಈ ನಿಲ್ದಾಣದಲ್ಲಿ ಕೆಲವು ನಿಮಿಷಗಳ ಕಾಲ ನಿಲ್ಲುತ್ತವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಮದನಪಲ್ಲೆಗೆ ಹತ್ತಿರವಿರುವ ವಿಮಾನ ನಿಲ್ದಾಣಗಳೆಂದರೆ ಹೈದರಾಬಾದ್‌ ಮತ್ತು ವೈಜಾಗ್‌ ವಿಮಾನ ನಿಲ್ದಾಣಗಳು. ಈ ಎರಡೂ ನಿಲ್ದಾಣಗಳು ಜಗತ್ತಿನ ಪ್ರಮುಖ ಕೇಂದ್ರಗಳೊಂದಿಗೆ ಉತ್ತಮ ಸಾರಿಗೆ ಸಂಪರ್ಕವನ್ನು ಕಲ್ಪಿಸುತ್ತವೆ. ವಿಮಾನವಿಳಿದ ಬಳಿಕ ಖಾಸಗಿ ವಾಹನಗಳನ್ನು ಪಡೆದು ನೀವು ಪ್ರಯಾಣವನ್ನು ಮುಂದುವರೆಸಬಹುದಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed