ಗುರುದ್ವಾರ ಮನ್ಜಿ ಸಾಹಿಬ್ ನ್ನು ಗುರುದ್ವಾರ ಅಲಮ್ಗಿರ್ ಸಾಹಿಬ್ ಎಂದೂ ಪ್ರಸಿದ್ಧವಾಗಿದೆ. ಇದು ಲುಧಿಯಾನದ ಆಗ್ನೇಯ ಭಾಗದಲ್ಲಿ 11 ಕಿ.ಮೀ. ದೂರದಲ್ಲಿದೆ. ಗುರು ಗೋಬಿಂದ್ ಸಿಂಗ್ ಜಿ ಅವರು ಮಚ್ಛಿವಾರ್ ಗೆ ತೆರಳುವ ಮೊದಲು ಕೆಲ ಸಮಯ ಇಲ್ಲಿ ತಂಗಿದ್ದರೆಂದು ಹೇಳಲಾಗುತ್ತಿದೆ. ಈ ಪ್ರದೇಶದಲ್ಲಿ ನೀರಿಲ್ಲವೆಂದು ಅರಿತ ಗುರು ಜೀ ಅವರು ನೆಲಕ್ಕೊಂದು ಬಾಣ ಬಿಟ್ಟರು. ಆ ಬಾಣ ನಾಟಿದ ಸ್ಥಳದಲ್ಲಿ ನೀರಿನ ಕಾರಂಜಿಯೇ ಚಿಮ್ಮಿತ್ತು.
ಇದನ್ನು ಬಳಿಕ ಕೊಳವಾಗಿ ಪರಿವರ್ತಿಸಲಾಗಿದ್ದು, ಈಗ ಇದನ್ನು ಬಾಣದ ಕೊಳ- ತಿರ್ಸಾರ್ ಎನ್ನಲಾಗುತ್ತಿದೆ. ಗುರುಜೀ ಹೇಳಿದಂತೆ ಈ ಕೊಳದಲ್ಲಿ ಮಿಂದೆದ್ದ ಮಹಿಳೆಯ ಕುಷ್ಠರೋಗವು ವಾಸಿಯಾಗಿದೆ. ಭಕ್ತನೊಬ್ಬ ಗುರುಜೀ ಅವರಿಗೆ ಪ್ರಯಾಣ ಮಾಡಲು ಕುದುರೆಯನ್ನು ನೀಡಿದ್ದ ಎನ್ನುವ ಕಥೆಯೂ ಇದೆ. ಗುರು ತೇಗ್ ಬಹದೂರ್ ಜೀ ಅವರ ಶಾಹಿದಿ ದಿವಸ್ ಭಾರೀ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯುತ್ತದೆ.