ಕಣ್ವಾಶ್ರಮ, ಸಮೃದ್ಧ ಹಸಿರು ಕಾಡುಗಳು ಮತ್ತು ದಿಣ್ಣೆಗಳ ಮಧ್ಯೆ ನೆಲೆಸಿರುವ ಲಾನ್ಸ್ ಡೌನ್ ನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಇಲ್ಲಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವ ಮಾಲಿನಿ ನದಿ ಈ ಆಶ್ರಮದ ಹತ್ತಿರ ಹರಿಯುತ್ತದೆ. ಆಶ್ರಮವು ಧ್ಯಾನಕ್ಕೆ ಯೋಗ್ಯವಾಗಿದ್ದು, ಸರಿಯಾದ ಸೌಲಭ್ಯಗಳನ್ನು ಪ್ರವಾಸಿಗರಿಗೆ ಒದಗಿಸುತ್ತದೆ. ಸಹಸ್ರಧಾರಾ ಜಲಪಾತವೂ ಕಣ್ವಾಶ್ರಮಕ್ಕೆ ನಿಕಟವಾಗಿದೆ.
ಒಂದು ದಂತಕಥೆಯ ಪ್ರಕಾರ, ಪ್ರಖ್ಯಾತ ಋಷಿ ವಿಶ್ವಾಮಿತ್ರರು ಒಮ್ಮೆ ಈ ಸ್ಥಳದಲ್ಲಿ ಧ್ಯಾನ ಮಾಡುತ್ತಿದ್ದರು. ಕಥೆಯ ಪ್ರಕಾರ, ಋಷಿ ಸ್ವರ್ಗಾಧಿಪತಿ ಇಂದ್ರನ ಕುರಿತು ಧ್ಯಾನ ಮಾಡುತ್ತಿದ್ದರು. ಆದ್ದರಿಂದ, ಇಂದ್ರನು ಋಷಿಯನ್ನು ವಿಚಲಿತಗೊಳಿಸಲು ಮೇನಕೆ ಎಂಬ ಸುಂದರಿಯನ್ನು ಕಳುಹಿಸಿದನು. ಮೇನಕೆಯು ವಿಶ್ವಾಮಿತ್ರನ ತಪಸ್ಸನ್ನು ಅಡ್ಡಿಪಡಿಸುವಲ್ಲಿ ಯಶಸ್ವಿಯಾದಳು ಮತ್ತು ಇವರಿಬ್ಬರ ಸಮಾಗಮದಿಂದ ಹುಟ್ಟಿದ ಹೆಣ್ಣು ಮಗುವಿಗೆ ಶಕುಂತಲಾ ಎಂದು ಹೆಸರಿಸಲಾಯಿತು. ನಂತರ, ಮೇನಕೆಯು ಈ ಆಶ್ರಮದಲ್ಲಿ ಋಷಿ ಕಣ್ವರ ಆರೈಕೆಯಲ್ಲಿ ಮಗುವನ್ನು ಬಿಟ್ಟು ಹೋದಳು. ಶಕುಂತಲೆಯು ಆಶ್ರಮದಲ್ಲಿ ಬೆಳೆದು ಹಸ್ತಿನಾಪುರದ ರಾಜ, ದುಷ್ಯಂತನನ್ನು ವಿವಾಹವಾದಳು. ಕೆಲವು ವರ್ಷಗಳ ನಂತರ, ಅವಳು ಗಂಡು ಮಗು ಭರತ ನಿಗೆ ಜನ್ಮ ನೀಡಿದಳು. ಭರತ ಅಥವಾ ಭರತೇಶ್ವರ ಎಂದು ಕೆಲವರು ನಂಬುತ್ತಾರೆ.