ಕುಶಿನಗರ ಹಿಂದೂ, ಜೈನ ಮತ್ತು ಬೌದ್ಧ ಜನರ ಪ್ರತೀಕವಾಗಿದೆ. ಇದನ್ನು ಪೂಜ್ಯ ಸ್ಥಳ ಎಂದು ಪರಿಗಣಿಸಲಾಗಿದೆ ಏಕೆಂದರೆ ಭಗವಾನ್ ಬುದ್ಧ ಮತ್ತು ಮಹಾವೀರ ಇಬ್ಬರೂ ಇಲ್ಲಿ ಆಗಾಗ ಭೇಟಿ ನೀಡುತ್ತಿದ್ದರು ಮತ್ತು ಧರ್ಮೋಪದೇಶ ನೀಡುತ್ತಿದ್ದರು. ಅಲ್ಲದೆ ಮಹಾವೀರ ಹಾಗು ಬುದ್ಧ ಇಬ್ಬರು ಇಲ್ಲಿಯೇ ನಿರ್ವಾಣ ಹೊಂದಿದರು.
ಈ ತಾಣವು ಐತಿಹಾಸಿಕ ಮತ್ತು ಧಾರ್ಮಿಕ ಸ್ಮಾರಕಗಳು, ಉದ್ಯಾನವನಗಳು, ದೇವಸ್ಥಾನ ಮತ್ತು ಸ್ತೂಪಗಳನ್ನು ಒಳಗೊಂಡಿದೆ. ಈ ಸ್ಥಳದಲ್ಲಿ ಭಾರತೀಯ ಪುರಾತತ್ವ ಇಲಾಖೆ ಕಾಲ ಕಾಲಕ್ಕೆ ಉತ್ಖನನಗಳನ್ನು ನಡೆಸಿದೆ ಮತ್ತು ಅಮೂಲ್ಯವಾದ ಆಗಿನ ಕಾಲದ ವಿಚಾರ ವಸ್ತುಗಳನ್ನು ಪತ್ತೆ ಹಚ್ಚಿದೆ.
ದೇವ್ರಹ ಆಸ್ಥಾನ ಅಥವಾ ದೇವಾಲಯ ಪದ್ರೌನ ದಿಂದ 3 ಕಿ.ಮೀ ಅಂತರದಲ್ಲಿದೆ. ಇದು ದೇವಸ್ಥಾನಗಳನ್ನು ಒಳಗೊಂಡ ಪರ್ವತವಾಗಿದೆ. ಈ ಗುಡಿಯಲ್ಲಿ ವಿಷ್ಣು ದೇವಾಲಯ ಮತ್ತು ಜೈನ ತೀರ್ಥಂಕರ ಮಹಾವೀರ ಮತ್ತು ನೇಮಿನಾಥರ ವಿಗ್ರಹವಿದೆ. ಇದನ್ನು ತ್ರಿಮೂರ್ತಿ ವಿಗ್ರಹ ಎನ್ನಲಾಗಿದೆ. ಜನಪದ ಅಧ್ಯಯನದ ಪ್ರಕಾರ, ಈ ದೇವಾಲಯ ದೊಡ್ಡ ಬೌದ್ಧ ವಿಗ್ರಹವನ್ನು ಹೊಂದಿತ್ತು.