ಕುರುಕ್ಷೇತ್ರದಲ್ಲಿ ಹಲವಾರು ಉದ್ಯಾನವನಗಳು ಇವೆ. ನಗರದ ದೈನಂದಿನ ಜಂಜಡಗಳಿಂದ ದೂರ ಉಳಿದು ನೆಮ್ಮದಿಯಿಂದ ಕಾಲ ಕಳೆಯಲು ಈ ಉದ್ಯಾನವನಗಳು ಹೇಳಿ ಮಾಡಿಸಿದ ಸ್ಥಳಗಳಾಗಿವೆ. ಇವುಗಳಲ್ಲಿ ಹರಿಯಾಣದ ವಿದ್ಯುಚ್ಛಕ್ತಿ ಖಾತೆ ಸಚಿವರಾದ ಓ.ಪಿ.ಜಿಂದಾಲ್ರವರ ಸ್ಮರಣೆಗಾಗಿ ನಿರ್ಮಿಸಲಾಗಿರುವ ಉದ್ಯಾನವನವು ಹೆಸರುವಾಸಿಯಾಗಿದೆ. ಈ ಉದ್ಯಾನವನದಲ್ಲಿ ಮಕ್ಕಳಿಗಾಗಿ ಹಲವಾರು ಆಟದ ಮೈದಾನಗಳನ್ನು ಇಡಲಾಗಿದೆ. ಬಣ್ಣ ಬಣ್ಣದ ಉಯ್ಯಾಲೆಗಳು, ಪ್ರಾಣಿ ವಲಯ, ವಿಹಾರ ವಲಯ ಮತ್ತು ಆಟದ ಮೈದಾನಗಳು ಈ ಉದ್ಯಾನವನದಲ್ಲಿವೆ. ಇದರ ಜೊತೆಗೆ ಇಲ್ಲಿ ಗುಲಾಬಿ ಉದ್ಯಾನವನ ಮತ್ತು ಜಾಗಿಂಗ್ ಪ್ರದೇಶ ಸಹ ಇದೆ. ಸಂಜೆಯ ಹೊತ್ತು ಇಲ್ಲಿ ಸಂಗೀತ ಕಾರಂಜಿ ಪ್ರದರ್ಶನ ಸಹ ಇರುತ್ತದೆ. ಈ ಉದ್ಯಾನವನವು 14 ಎಕರೆ ಪ್ರದೇಶದಷ್ಟು ವಿಸ್ತೀರ್ಣವನ್ನು ಹೊಂದಿದೆ. ಇಲ್ಲಿ ಧ್ಯಾನ ಮಾಡುವ ಸಲುವಾಗಿ ಹಲವಾರು ಮಂದಿ ಬರುತ್ತಿರುತ್ತಾರೆ.