ಮಾರ್ಕಂಡೇಶ್ವರ್ ಮಹಾದೇವ್ ದೇವಾಲಯವು ಕುರುಕ್ಷೇತ್ರದಿಂದ 25 ಕಿ.ಮೀ ದೂರದಲ್ಲಿರುವ ಶಹಬಾದ್ ಮಾರ್ಕಂಡದಲ್ಲಿ ನೆಲೆಗೊಂಡಿದೆ. ಈ ಸ್ಥಳದಲ್ಲಿ ಶಿವನು ತನ್ನ ಭಕ್ತನನ್ನು ಉಳಿಸುವ ಸಲುವಾಗಿ ಯಮಧರ್ಮರಾಜನನ್ನೆ ನಿರ್ನಾಮ ಮಾಡುವ ನಿರ್ಧಾರಕ್ಕೆ ಬಂದದ್ದು. ಆ ನಂತರ ಆ ಆಯಸ್ಸು ತೀರಿದ ಬಾಲಕನಿಗೆ ಶಿವನು ಅಮರತ್ವವನ್ನು ಪ್ರಸಾದಿಸಿದನು. ಈ ಹಳೆಯ ದೇವಾಲಯವು ಮಹಾಭಾರತ ಕಾಲಕ್ಕಿಂತ ಹಿಂದಿನದು ಎಂದು ಭಾವಿಸಲಾಗಿದೆ.
ಇಲ್ಲಿನ ಹೊಸ ದೇವಾಲಯವು 20 ನೇ ಶತಮಾನಕ್ಕೆ ಸೇರಿದ್ದಾಗಿದೆ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಬರುವ ಭಾನುವಾರಗಳಂದು ಇಲ್ಲಿ ಭಕ್ತಾಧಿಗಳ ಹಿಂಡೇ ನೆರೆಯುತ್ತದೆ. ಈ ದೇವಾಲಯವು ಅಂಬಾಲದಿಂದ 20 ಕಿ.ಮೀ ದೂರದಲ್ಲಿ ಗ್ರ್ಯಾಂಡ್ ಟ್ರಂಕ್ ರಸ್ತೆಯಲ್ಲಿ ದೆಹಲಿಗೆ ಸಾಗುವ ಹಾದಿಯಲ್ಲಿ ನೆಲೆಗೊಂಡಿದೆ. ಈ ದೇವಾಲಯದ ಗೋಡೆಯ ಮೇಲೆ ಶಿವನು ಮಾರ್ಕಾಂಡೇಯನನ್ನು ಯಮನಿಂದ ಕಾಪಾಡುತ್ತಿರುವ ವರ್ಣ ಚಿತ್ರವನ್ನು ರಚಿಸಲಾಗಿದೆ.