ಈ ದೇವಾಲಯವು ಪಾಂಡವರ ಜೊತೆಗೆ ನಿಕಟ ಸಂಬಂಧವನ್ನು ಹೊಂದಿದೆ. ಈ ದೇವಾಲಯವು ಥಾನೇಶ್ವರದ ಉತ್ತರ ದಿಕ್ಕಿನಲ್ಲಿ ನೆಲೆಗೊಂಡಿದೆ. ಕೆಲವು ದಂತ ಕತೆಗಳ ಪ್ರಕಾರ, ಪಾಂಡವ ಸಹೋದರರು ಕೌರವರ ಮೇಲೆ ಅಂತಿಮ ಯುದ್ಧ ಸಾರುವ ಮೊದಲು ಇಲ್ಲಿ ಕಠಿಣ ತಪಸ್ಸನ್ನು ಮಾಡಿದ್ದರಂತೆ. ಭದ್ರಕಾಳಿ ದೇವಾಲಯವು ಕಾಳಿಕಾ ಮಾತೆಯ ದೇವಾಲಯವಾಗಿದ್ದು, ಆಕೆಯ ಹಲವಾರು ಅವತಾರಗಳನ್ನು ಇದು ಸಾರಿ ಹೇಳುತ್ತಿದೆ.
ಇದು ಶಕ್ತಿ ಪೀಠಗಳಲ್ಲಿ ಒಂದು ಎಂಬ ಖ್ಯಾತಿಗೆ ಪಾತ್ರವಾಗಿದೆ. ಹಿಂದೂಗಳ ನಂಬಿಕೆಯ ಪ್ರಕಾರ ಇದು ಸತಿಯ ಕೆಳ ಕಾಲು ಬಿದ್ದ ಸ್ಥಳವಂತೆ. ಇಲ್ಲಿ ಹರಕೆಯನ್ನು ಹೊತ್ತರೆ ಅದು ಖಂಡಿತ ನೆರವೇರುತ್ತದೆಯೆಂಬ ಮಾತು ಇಲ್ಲಿ ಚಾಲ್ತಿಯಲ್ಲಿದೆ. ಅದಕ್ಕಾಗಿ ಇದು ಭಕ್ತಧಿಗಳ ವಲಯದಲ್ಲಿ ಶೇಷ್ಠ ಸ್ಥಾನವನ್ನು ಪಡೆದಿದೆ. ಭಕ್ತಾಧಿಗಳು ಇಲ್ಲಿನ ದೇವರಿಗೆ ಮಣ್ಣಿನ ಕುದುರೆಯನ್ನು ಸಮರ್ಪಿಸುತ್ತಾರೆ. ಕೆಂಪು ಮರಳುಗಲ್ಲಿನಿಂದ ಮಾಡಲಾದ ಈ ದೇವಾಲಯದಲ್ಲಿ ನವರಾತ್ರಿಯನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ.