ನಲ್ಲಮಲ್ಲ ಅರಣ್ಯ ದಕ್ಷಿಣ ಭಾರತದಲ್ಲಿನ ಅತ್ಯಂತ ದೊಡ್ಡ ಪ್ರಶಾಂತ ಕಾಡುಗಳಲ್ಲೊಂದು. ಪಶ್ಚಿಮ ಘಟ್ಟದ ಭಾಗವಾದ ನಲ್ಲಮಲ ಬೆಟ್ಟದಲ್ಲಿ ಈ ಅರಣ್ಯವಿದೆ. ಈ ಅರಣ್ಯ ಕರ್ನೂಲ್, ಗುಂಟೂರು, ಕಡಪ, ಮೆಹಬೂಬ್ ನಗರ ಮತ್ತು ಪ್ರಕಾಶಂ ಈ ಐದು ಜಿಲ್ಲೆಗಳಲ್ಲಿ ಆವರಿಸಿದೆ. ಹಲವು ವರ್ಷಗಳ ಹಿಂದೆ ಈ ಅರಣ್ಯ ಸಮೃದ್ದವಾಗಿತ್ತು. ಪ್ರಸಿದ್ದ ವನ್ಯಜೀವಿ ಬರಹಗಾರ ಕೆನೆತ್ ಆಂಡರ್ ಸನ್ ಈ ಕಾಡುಗಳಲ್ಲಿನ ಸಾಹಸಗಳ ಬಗ್ಗೆ ಬರೆದಿದ್ದಾನೆ. ಈ ಕಾಡುಗಳಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿದ್ದು ಇದು ನಾಗಾರ್ಜುನ ಸಾಗರ - ಶ್ರೀಶೈಲಂ ಹುಲಿ ಸಂರಕ್ಷಿತ ಪ್ರದೇಶದ ಒಂದು ಭಾಗವಾಗಿದೆ. ಕಪ್ಪು ಚುಕ್ಕೆ ಚಿರತೆಗಳನ್ನು ಕೂಡ ಕಾಣಬಹುದು.