ರಾಜನಾದ ರಾಣಾ ಕುಂಭನಿಂದ ಈ ದೇವಸ್ಥಾನ 1460 ರಲ್ಲಿ ನಿರ್ಮಾಣವಾಗಿದೆ. ಈ ದೇಗುಲವು ಕುಂಭಲ್ಗಡ್ ಕೋಟೆಯ ಕೆಳಗೆ ನೆಲೆಸಿದ್ದು ನಾಲ್ಕು ಸ್ಲ್ಯಾಬಗಳನ್ನು ಹೊಂದಿದೆ. ಸ್ಲ್ಯಾಬ್ ಗಳ ಮೇಲೆ ಮೇವಾರ್ ಇತಿಹಾಸದ ಕುರಿತು ಬರೆಯಲಾಗಿರುವುದನ್ನು ಪ್ರವಾಸಿಗರು ಕಾಣಬಹುದು. ಈ ಇತಿಹಾಸವು ಗುಹಿಲ್ ನಿಂದ ಪ್ರಾರಂಭವಾಗಿ, ರಾಣಾ ಕುಂಭನ ಕಾಲದವರೆಗೆ ವಿವರಗಳನ್ನು ಹೊಂದಿದೆ. ಗುಹಿಲ್ ಮೇವಾರ್ ನ ಸಂಸ್ಥಾಪಕ.ಪ್ರಸ್ತುತ ಸ್ಲ್ಯಾಬ್ ಗಳನ್ನು ಉದೈಪುರ್ ನ ಸಂಗ್ರಹಾಲಯದಲ್ಲಿ ಸಂರಕ್ಷಿಸಿಡಲಾಗಿದೆ. ಸಂದರ್ಶಕರು, ಐಶ್ವರ್ಯ ದೇವತೆಯಾದ ಕುಬೇರ ಹಾಗು ಇನ್ನೆರಡು ಸ್ಮಾರಕ ಸಮಾಧಿಗಳನ್ನು ಈ ದೇವಸ್ಥಾನದ ಒಳಗಡೆ ಇರುವುದನ್ನು ಕಾಣಬಹುದಾಗಿದೆ. ಈ ಎರಡು ಸ್ಮಾರಕಗಳನ್ನು ರಾಣಾ ಕುಂಭ ಮತ್ತು ಪೃಥ್ವಿ ರಾಜ್ ಚೌಹಾಣ್ ರ ಸ್ಮರಣಾರ್ಥವಾಗಿ ಮಾಡಲಾಗಿದೆ. ಈ ದೇವಸ್ಥಾನದ ಬಳಿಯೆ ಒಂದು ಸುಂದರವಾದ ಜಲಾಶಯವಿದೆ.