ಉಪ್ಪಿಲಿ ಅಪ್ಪನ್ ಪೆರುಮಾಳ್ ಎಂಬ ಹೆಸರಿನಲ್ಲಿ ಭಗವಂತ ವಿಷ್ಣುವನ್ನು ಆರಾಧಿಸಲ್ಪಡುವ ಈ ದೇವಾಲಯದಲ್ಲಿ ಆತನ ಪತ್ನಿ ಭೂಮಿ ದೇವಿ, ಭೂಮಿ ದೇವಿಯ ತಂದೆ ಋಷಿ ಮಾರ್ಕಾಂಡೇಯರೂ ಆರಾಧಿಸಲ್ಪಡುತ್ತಾರೆ. ವಿಶ್ವದಲ್ಲಿರುವ 108 ದಿವ್ಯದೇಶಂ (ವಿಷ್ಣು ಆರಾಧನಾ ದೇವಾಲಯಗಳು - ಇವುಗಳಲ್ಲಿ 105 ಭಾರತದಲ್ಲಿ, ಒಂದು ನೇಪಾಳದಲ್ಲಿದ್ದರೆ ಇನ್ನೆರಡು ಈ ಭೂಮಿಯ ಮೇಲಿಲ್ಲದ ಸಾಮ್ರಾಜ್ಯಗಳಲ್ಲಿವೆ (ವೈಕುಂಠ ಮತ್ತು ಹಾಲಿನ ಕಡಲು). ಈ ದೇವಾಲಯದಲ್ಲಿ ಪ್ರತಿವರ್ಷ ಬ್ರಹ್ಮೋತ್ಸವಂ ಮತ್ತು ಕಲ್ಯಾಣ ಎಂಬ ಎರಡು ಬೃಹತ್ ಉತ್ಸವಗಳು ನಡೆಯುತ್ತವೆ.
ಉಪ್ಪಿಲಿಅಪ್ಪನ್ ದೇವಾಲಯ ಕುಂಬಕೋಣಂ ನಗರದಿಂದ ಸುಮಾರು ಏಳು ಕಿ.ಮೀ ದೂರದಲ್ಲಿರುವ ತಿರುಂಗೇಶ್ವರಂ ಎಂಬ ಗ್ರಾಮದಲ್ಲಿದೆ. 'ದಕ್ಷಿಣದ ತಿರುಪತಿ' ಎಂದು ಪ್ರಖ್ಯಾತಿ ಪಡೆದಿರುವ ಈ ದೇವಾಲಯವನ್ನು ತಲುಪಲು ಉತ್ತಮ ರಸ್ತೆಯ ಸೌಲಭ್ಯವಿದೆ. ಈ ದೇವಾಲಯದೊಳಕ್ಕೆ ಉಪ್ಪು ಹಾಕಿದ ಆಹಾರಕ್ಕೆ ಪ್ರವೇಶವಿಲ್ಲ. ಗೊತ್ತಿದ್ದೂ ಉಪ್ಪು ಹಾಕಿದ ಆಹಾರ ಕೊಂಡು ಹೋದರೆ ನಾರಾಯಣನ ಕ್ರೋಧಕ್ಕೆ ಬಲಿಯಾಗಬೇಕಾಗುತ್ತದೆ ಎಂಬ ಪ್ರಪೀತಿಯಿದೆ. ಆದುದರಿಂದಲೇ ಈ ದೇವಾಲಯದಲ್ಲಿ ತಯಾರಾಗುವ ಎಲ್ಲಾ ಆಹಾರಗಳಿಗೆ ಉಪ್ಪೇ ಇರುವುದಿಲ್ಲ.