ವಿಷ್ಣುವಿನ ಒಂದು ಅವತಾರವಾದ ರಾಮನನ್ನು ಈ ದೇವಾಲಯದಲ್ಲಿ ಪೂಜಿಸಲಾಗುತ್ತದೆ. ನಾಯಕ ವಂಶದ ಆಳ್ವಿಕೆಯ ಕಾಲದಲ್ಲಿ ಪ್ರಧಾನಮಂತ್ರಿಗಳಾಗಿದ್ದ ಗೋವಿಂದ ದೀಕ್ಷಿತರ್ ರವರ ಸಲಹೆಯ ಮೇರೆಗೆ ಈ ದೇವಾಲಯವನ್ನು ನಿರ್ಮಿಸಲಾಯಿತು. ದೇವಾಲಯದ ಆಕರ್ಷಣೆ ಇರುವುದು ಅದರ ಗಾತ್ರದಲ್ಲಲ್ಲ, ಅದರ ಸೂಕ್ಷ್ಮ ಕೆತ್ತನೆಯ ಕೆಲಸಗಳಲ್ಲಿ.
ಈ ದೇವಾಲಯದ ನಿರ್ಮಾಣಕ್ಕೂ ಮೊದಲು ನಿರ್ಮಿಸಲಾಗಿದ್ದ ಚಕ್ರಪಾಣಿ ದೇವಾಲಯದ ನಡುವೆ ಒಂದು ಮೊಗಸಾಲೆಯನ್ನು ನಿರ್ಮಿಸಲಾಗಿತ್ತು. ಈ ಮೊಗಸಾಲೆ ಅಂದಿನ ದಿನಗಳಲ್ಲಿ ಪ್ರಮುಖ ವಾಣಿಜ್ಯ ಚಟುವಟಿಕೆಯ ಕೇಂದ್ರವಾಗಿತ್ತು. ಇಡಿಯ ದೇವಾಲಯದ ಗೋಡೆಗಳನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಿ ಇಡಿಯ ರಾಮಾಯಣದ ಚಿತ್ರಣವನ್ನು ಬಿಡಿಸಿರುವುದು ಈ ದೇವಾಲಯದ ವಿಶೇಷವಾಗಿದೆ.