ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದಾಗ ಪ್ರವಾಸಿಗರು ನೋಡಲೆ ಬೇಕಾದ ಸ್ಥಳಗಳಲ್ಲಿ ವೇದವ್ಯಾಸ ಸಂಪುಟ ನರಸಿಂಹ ದೇವಾಲಯವು ಒಂದು. ಇದನ್ನು ದ್ವೈತ ಸಿದ್ಧಾಂತದ ಪ್ರತಿಪಾದಕರಾದ ಶ್ರೀ ಮಧ್ವಾಚಾರ್ಯರು ನಿರ್ಮಿಸಿದರು. ಇದು ಸುಬ್ರಹ್ಮಣ್ಯ ದೇವಾಲಯದ ಆಗ್ನೇಯ ಭಾಗದಲ್ಲಿದೆ. ಭಕ್ತಾಧಿಗಳು ಇಲ್ಲಿ ನರಸಿಂಹನ ಸಾಲಿಗ್ರಾಮವನ್ನು ಪ್ರತಿದಿನವನ್ನು ಪೂಜಿಸುತ್ತಾರೆ. ಆದರು ಸಾಲಿಗ್ರಾಮವನ್ನು ಹೊರತೆಗೆಯುವುದಿಲ್ಲ. ಅಭಿಷೇಕ ಮಾಡಲು ಮಾತ್ರ ಇದನ್ನು ಹೊರತೆಗೆಯಲಾಗುತ್ತದೆ.ದಂತಕಥೆಗಳ ಪ್ರಕಾರ ಈ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿರುವ ಲಕ್ಷ್ಮಿ ನರಸಿಂಹ ಮತ್ತು ವೇದವ್ಯಾಸ ಮೂರ್ತಿಗಳನ್ನು ವೇದವ್ಯಾಸರು ಮಧ್ವಾಚಾರ್ಯರಿಗೆ ನೀಡಿದರಂತೆ. ಅಸಂಖ್ಯಾತ ಭಕ್ತಾಧಿಗಳು ವೈಶಾಖ ಮಾಸದಲ್ಲಿ ಮೂರುದಿನಗಳ ಮಟ್ಟಿಗೆ ಜರುಗುವ ನರಸಿಂಹ ಜಯಂತಿ ಉತ್ಸವಕ್ಕೆ ಆಗಮಿಸುತ್ತಾರೆ. ಈ ದೇವಾಲಯದ ನಿರ್ವಹಣೆಯನ್ನು ಸುಬ್ರಹ್ಮಣ್ಯ ಮಠದ ಸ್ವಾಮಿಯವರು ಅತ್ಯಂತ ಭಕ್ತಿ ಭಾವಗಳಿಂದ ನಡೆಸಿಕೊಡುತ್ತಾರೆ.