ಸುಬ್ರಹ್ಮಣ್ಯ ದೇವಾಲಯಕ್ಕೆ ಹೋದಾಗ ಸಮಯಾವಕಾಶವಿದ್ದರೆ ಅಲ್ಲಿಗೆ ಸಮೀಪದ ಆದಿ ಸುಬ್ರಹ್ಮಣ್ಯ ದೇವಾಲಯಕ್ಕೆ ಒಮ್ಮೆ ಭೇಟಿ ಕೊಡಬಹುದು. ಈ ದೇವಾಲಯದ ಗರ್ಭ ಗುಡಿಯ ಒಳಗೆ ವಲ್ಮೀಕ ಎಂಬ ಹುತ್ತವಿದ್ದು ಅದನ್ನು ಪೂಜಿಸಲಾಗುತ್ತದೆ. ಇತಿಹಾಸ ಪೂರ್ವ ಕಾಲದಿಂದಲು ಹುತ್ತಗಳನ್ನು ಆದಿಶೇಷ ಮತ್ತು ವಾಸುಕಿಯ ರೂಪದಲ್ಲಿ ಪೂಜಿಸಿಕೊಂಡು ಬರಲಾಗುತ್ತದೆ. ಈ ದೇವಾಲಯದ ಸುತ್ತಲು ಹಚ್ಚ ಹಸಿರಿನಿಂದ ಕಂಗೊಳಿಸುವ ಕಾಡುಗಳನ್ನು ಮತ್ತು ಬೆಟ್ಟದ ತೊರೆಗಳನ್ನು ಕಾಣಬಹುದು.ಜನಪದ ಕಥೆಯೊಂದರ ಪ್ರಕಾರ ಸೃಷ್ಟಿಕರ್ತನಾದ ಬ್ರಹ್ಮನು ಸುಬ್ರಹ್ಮಣ್ಯ ಸ್ವಾಮಿಯ ಬಳಿ ಈ ಸ್ಥಳದಲ್ಲಿ ಮನೆ ಕಟ್ಟಲು ಅನುಮತಿ ಕೋರಿದನಂತೆ. ಈ ಸ್ಥಳ ಬ್ರಹ್ಮನ ನೆಲೆಯಾಗಿತ್ತು, ಆದರು ಯಮನ ಶಾಪದಿಂದ ಬ್ರಹ್ಮನ ಈ ನೆಲೆ ತನ್ನ ಪ್ರಾಮುಖ್ಯತೆ ಕಳೆದುಕೊಂಡಿತು. ಇಲ್ಲಿ ಯಾತ್ರಿಕರಿಗೆ ಹುತ್ತದ ’ಮೃತ್ತಿಕಾ’( ಮಣ್ಣು) ವನ್ನು ಪ್ರಸಾದವಾಗಿ ನೀಡಲಾಗುತ್ತದೆ. ಇದು ಚರ್ಮ ರೋಗಗಳನ್ನು ನಿವಾರಿಸುವ ಗುಣವನ್ನು ಹೊಂದಿದೆಯೆಂದು ಪ್ರಸಿದ್ಧಿ ಪಡೆದಿದೆ.