ನಿಮಗೆ ಸಾಂಪ್ರದಾಯಿಕ ಧಿರಿಸುಗಳನ್ನು ಮತ್ತು ವಸ್ತುಗಳನ್ನು ಕೊಳ್ಳುವ ಹಂಬಲವಿದೆಯೇ? ಹಾಗಾದರೆ ಘುರ್ನಿಗೆ ನೀವು ತಪ್ಪದೆ ಭೇಟಿ ನೀಡಬೇಕು. ಇಲ್ಲಿನವರ ಪ್ರಕಾರ ಕೃಷ್ಣನಗರ್ ಮಹಾರಾಜ ಕೃಷ್ಣಚಂದ್ರರವರಿಗೆ ಮಣ್ಣಿನ ಬೊಂಬೆಗಳು ಮತ್ತು ಮಣ್ಣಿನ ಪಾತ್ರೆಗಳು ಭಾರೀ ಇಷ್ಟವಾಗಿದ್ದವಂತೆ.
ಘುರ್ನಿಯು ಸುಂದರವಾದ ಒಡವೆ ವಸ್ತುಗಳನ್ನು ಕೊಳ್ಳಲು ಖ್ಯಾತಿ ಪಡೆದ ಸ್ಥಳವಾಗಿದೆ. ಇಲ್ಲಿ ಉಡುಗೊರೆಗಳಿಗೆ, ಮನೆಗಳಿಗೆ ಮತ್ತು ಖುದ್ದು ನಿಮಗೆ ಒಪ್ಪುವಂತಹ ವಸ್ತುಗಳು ದೊರೆಯುತ್ತವೆ. ಇಲ್ಲಿನ ಅಂಗಡಿ ಮಾಲೀಕರು ನಿಮಗೆ ಹಿಡಿಸಿದ ವಸ್ತುಗಳನ್ನು ಗಿಫ್ಟ್ ಪ್ಯಾಕ್ ಮಾಡಿ ಇಲ್ಲವೆ ಮನೆಗೆ ಕೊಂಡು ಹೋಗಲು ಅನುಕೂಲವಾಗುವಂತೆ ಪ್ಯಾಕ್ ಮಾಡಿಕೊಡುತ್ತಾರೆ. ಇಲ್ಲಿನ ವಿಶಿಷ್ಟವಾದ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅನುಕೂಲವಾಗುವಂತೆ ಬಿಚ್ಚಿ ಪ್ಯಾಕ್ ಮಾಡಲಾಗುತ್ತದೆ.