ತುರುವಳ್ಳಂ ಪರಶುರಾಮ ಸ್ವಾಮಿ ದೇವಸ್ಥಾನವು ಕೊವಲಂ ಬಳಿಯ ಕರಮಣಾ (Karamana) ನದಿ ತೀರದಲ್ಲಿ ಕಾಣಬಹುದು. ಇಡೀ ಕೇರಳ ರಾಜ್ಯದಲ್ಲಿಯೆ ಇರುವ ಒಂದೇ ಒಂದು ಪರಶುರಾಮ ದೇವಾಲಯ ಇದಾಗಿದೆ. ಈ ಸುಂದರವಾದ ದೇವಾಲಯವು ಕೊವಲಂ ಹಾಗೂ ತ್ರಿವೇಂದ್ರಂ ವಿಮಾನ ನಿಲ್ದಾಣ ಎರಡೂ ಸ್ಥಳಗಳಿಂದ ೯ ಕಿಲೋ ಮೀಟರ್ ದೂರದಲ್ಲಿದ್ದು ಈ ಸ್ಥಳಗಳಿಗೆ ಕೇಂದ್ರದಂತಿದೆ.
ಕೇರಳವನ್ನು ನಿರ್ಮಿಸಿದ್ದು ಪರಶುರಾಮನಾದ್ದರಿಂದ ಅವನ ಗೌರವಾರ್ಥವಾಗಿ ಪರಶುರಾಮನ ದೇವಾಲಯವನ್ನು ಕಟ್ಟಲಾಗಿದೆ ಎಂದು ದಾಖಲಿಸಲಾಗಿದೆ. ಈ ದೇವಾಲಯವು ಅಪಾರ ಪ್ರಮಾಣದ ಭಕ್ತಾದಿಗಳನ್ನು ಹೊಂದಿದ್ದು ಪ್ರತಿ ವರ್ಷ ಸಹಸ್ರಾರು ಸಂಖ್ಯೆಯಲ್ಲಿ ಜನರು ಪೂಜೆ ಸಲ್ಲಿಸಲು ಬರುತ್ತಾರೆ ಇಲ್ಲಿನಗೊಮ್ಮೆ ಭೇಟಿಕೊಟ್ಟು ಇಲ್ಲಿನ ಸೊಬಗನ್ನು ಸವಿದು ನಿಮ್ಮ ಪ್ರಯಾಣವನ್ನು ಪರಿಪೂರ್ಣ ಮಾಡಿಕೊಳ್ಳಿ!
ಐತಿಹಾಸಿಕ ನಂಬಿಕೆಯಂತೆ ಪರಶುರಾಮನ ದೇವಾಲಯವು 12 ಮತ್ತು 13ನೇ ಶತಮಾನದ ಮಧ್ಯ ಭಾಗದಲ್ಲಿ ಕಟ್ಟಲಾಗಿದೆ. ಇದು ಇಂದು ಕೇರಳ ರಾಜ್ಯದ ಪುರಾತತ್ವ ಇಲಾಖೆಗೆ ಸೇರಿದ ಪಾರಂಪರಿಕ ಕಟ್ಟಡವಾಗಿದೆ. ಸಹಸ್ರಾರು ಜನರು ಇಲ್ಲಿಗೆ ತಮ್ಮ ಪೂರ್ವಜರಿಗೆ ನೈವೇದ್ಯ ಸಲ್ಲಿಸಲು ಬರುತ್ತಾರೆ. ಈ ಪದ್ಧತಿಗೆ ಬಲಿತ್ರಪಮನ್ (Balitharpaman) ಎನ್ನಲಾಗುತ್ತದೆ. ಪ್ರಮುಖವಾಗಿ ’ಕಕ್ರಿದಕಾ ವೆವು’ (karkidaka vavu) ಯ ದಿನ ಕರಮಣಾ (Karamana) ನದಿಯ ಪವಿತ್ರ ನೀರಿನಲ್ಲಿ ಸ್ನಾನ ಮಾಡಿ ನಂತರ ಆಚರಣೆಯನ್ನು ಮಾಡಲಾಗುತ್ತದೆ.