ಈ ಕೃಷಿ ಕಾಲೇಜು ವೆಳ್ಳಾಯಿನಿ ಭಾಗದಲ್ಲಿ ಸ್ಥಾಪಿಸಲಾಗಿದ್ದು, ಮೇ, 1955 ರಲ್ಲಿ ಅಸ್ತಿತ್ವಕ್ಕೆ ಬಂದಿದೆ.ಈ ಕೃಷಿ ಕಲಿಕಾ ಕೇಂದ್ರವು ಎಲ್ಲಾ ವಿದಧ ಕೃಷಿಯ ಕ್ಷೇತ್ರಗಳಲ್ಲಿ ಆಸಕ್ತ ಪದವೀಧರ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿಗಳನ್ನು ಒದಗಿಸುತ್ತದೆ.
ಅತ್ಯಂತ ಉತ್ಕೃಷ್ಟವೆನಿಸಿತುವ ಈ ಕೃಷಿ ವಿದ್ಯಾ ಸಂಸ್ಥೆಯು ಹಿಂದಿನ ಕಾಲದಲ್ಲಿ ತಿರುವಾಂಕೂರು ಹಾಗೂ ಕೊಚ್ಚಿ ರಾಜಮನೆತನಗಳ ಅರಮನೆಯಾಗಿತ್ತು ಎನ್ನುವ ಪ್ರತೀತಿಯಿದೆ. ಆದ್ದರಿಂದ ಈ ಸಂಸ್ಥೆ ಪ್ರವಾಸಿಗರ ಆಕರ್ಷಣೆಯೂ ಹೌದು. ವಿವಿಧ ಶಾಲಾ ಕಾಲೇಜುಗಳ್ ವಿದ್ಯಾರ್ಥಿಗಳು ಪ್ರವಾಸಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ. ಇಂದು ಈ ಕೃಷಿ ಸಂಸ್ಥೆಯನ್ನು ಭಾರತದ ಇತರ ಕೃಷಿ ಸಂಸ್ಥೆಗಳೊಂದಿಗೆ ನಮೂದಿನಲಾಗಿದೆ. ಇಲ್ಲಿ ಸಂಶೋಧನೆಗಳನ್ನು ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ವಿದ್ಯಾರ್ಥಗಳು ತಮ್ಮ ಆಯ್ಕೆಯ ವೃತ್ತಿ ವಿಷಯಗಳಲ್ಲಿ ಪರಿಣಿತಿಹೊಂದಲಿ ಸಕ್ರೀಯವಾಗಿ ಸಹಾಯ ಮಾಡಲಾಗುತ್ತದೆ. ಸೈದ್ಧಾಂತಿಕ ಜ್ಞಾನದ ಜೊತೆಗೆ, ದೇಶದಲ್ಲಿರುವ ಎಲ್ಲಾ ಕೃಷಿ ಸಂಸ್ಥೆಗಳಿಗೆ ಭೇಟಿ ನೀಡಿ ಪಾಯೋಗಿಕ ಅನುಭವಗಳನ್ನು ಪಡೆಯಲು ನೆರವಾಗುತ್ತಿದೆ ಕೃಷಿ ಸಂಸ್ಥೆ. ಇದೊಂದು ಅಪ್ಪಟ ವಿದ್ಯಾ ಸಂಸ್ಥೆಯಾಗಿದ್ದು ದಕ್ಷಿಣ ದ ಕೃಅಷಿಯ ಬಗ್ಗೆ ಕಲಿಯಲು ಆಸಕ್ತಿಯಿರುವ ದೇಶದ ಎಲ್ಲಾ ಭಾಗದ ವಿದ್ಯಾರ್ಥಿಗಳೂ ಇಲ್ಲಿ ಬಂದು ಶಿಕ್ಷಣ ಪಡೆಯಲು ಈ ಕೃಷಿ ಸಂಸ್ಥೆ ಅನುವು ಮಾಡಿ ಕೊಟ್ಟಿದೆ.