ಪಾರಂಪರಿಕ ತಾಣದಲ್ಲಿರುವ ತಾಳತಂಗಡಿ ಜುಮ್ಮಾ ಮಸೀದಿಯು ಕೊಟ್ಟಾಯಂ ಸಮೀಪದಲ್ಲಿರುವ ತಾಳತಂಗಡಿ ಎಂಬ ಪುಟ್ಟ ಗ್ರಾಮದಲ್ಲಿದೆ. ಶತಮಾನಗಳ ಹಿಂದಿನ ಇತಿಹಾಸ ಹೊಂದಿರುವ ಈ ಮಸೀದಿ ಅತ್ಯಂತ ಪುರಾತನವಾದ್ದು. ಇದು ಭಾರತದಲ್ಲಿ ನಿರ್ಮಾಣವಾದ ಪ್ರಪ್ರಥಮ ಮಸೀದಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅತ್ಯಂತ ಶ್ರೀಮಂತವಾದ ವಾಸ್ತುಕಲೆ ಹಾಗೂ ಮರದ ಕೆತ್ತನೆಗಳಿಂದಾಗಿ ಮಸೀದಿ ಈಗಲೂ ತನ್ನ ಸೌಂದರ್ಯವನ್ನು ಕಾಪಾಡಿಕೊಂಡಿದೆ.
ತಾಳತಂಗಡಿ ಮಸೀದಿಯು 'ತಾಜ್ ಜುಮ್ಮಾ ಮಸೀದಿ' ಎಂದೇ ಜನಪ್ರೀಯತೆಯನ್ನು ಹೊಂದಿದೆ. ಈ ಮಸೀದಿಯನ್ನು ನಿರ್ಮಾಣ ಮಾಡಿದವರು ಕೇರಳಾ ರಾಜ್ಯದ ವಿವಿಧ ಪ್ರದೇಶಗಳಿಗೆ ಸೇರಿದ್ದಾರೆಂದು ಹೇಳಲಾಗಿದೆ. ಕೊಟ್ಟಾಯಂನಿಂದ ಸುಮಾರು 7 ಕಿ.ಮೀ.ದೂರದಲ್ಲಿರುವ ತಿರುವೀರ್ಪು ದೇವಾಲಯದ ಸಮೀಪದಲ್ಲಿ ಹರಿಯುವ ಮೀನಾಕ್ಷಿ ನದಿಯ ತಟದಲ್ಲಿ ತಾಳತಂಗಡಿ ಜುಮ್ಮಾ ಮಸೀದಿ ಇದೆ. ಕೊಟ್ಟಾಯಂಗೆ ಏನಾದರೂ ನೀವು ರಜೆದಿನಗಳಲ್ಲಿ ಕಳೆಯಲು ಬಂದರೆ ಈ ಮಸೀದಿ ನೋಡದೆ ಹೋದರೆ ಆ ಪ್ರವಾಸ ಅಪೂರ್ಣವೆ ಎಂದು ಭಾಸವಾಗುವುದು ಸಹಜ.