ಈ ಒಂದು ಪ್ರಸಿದ್ಧ ಆಕರ್ಷಣೆಯಾದ ರಂಗಸ್ವಾಮಿ ಖಂಬ ಮತ್ತು ಶಿಖರ ಸಮುದ್ರ ಮಟ್ಟದಿಂದ 1794 ಮೀಟರ್ ಎತ್ತರದಲ್ಲಿದ್ದು, ಕೋತಗಿರಿಯಿಂದ 20 ಕಿ.ಮೀ. ದೂರದಲ್ಲಿದೆ. ಇದು ಒಂದು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ಸ್ಥಳೀಯರಿಗೆ ಬಹಳ ಮಹತ್ವದ್ದಾಗಿದೆ. ಪುರಾಣ ಕಥೆಯ ಪ್ರಕಾರ, ಕೊಯಮತ್ತೂರು ಸಮೀಪ ಕರಮದೈ ಸ್ಥಳದಿಂದ ರಂಗಸ್ವಾಮಿ ದೇವರು ಲಕ್ಷ್ಮಿಯ ಮೇಲೆ ಜಗಳಮಾಡಿ ಕೋಪಗೊಂಡು ಈ ಸ್ಥಳಕ್ಕೆ ಬಂದು ನೆಲೆಸಿದರು. ಇದಕ್ಕೆ ಕುರುಹಾಗಿ ಈಗಲೂ ಬೆಟ್ಟದ ಬುಡದಲ್ಲಿ ದೇವರ ಪಾದಗಳಗುರುತನ್ನು ನಾವು ಕಾಣಬಹುದು. ಈ ಖಂಬವು ರಂಗಸ್ವಾಮಿ ಪರ್ವತ ಶಿಖರದ ವಾಯವ್ಯ ಭಾಗದಲ್ಲಿದ್ದು, ನಾನೂರು ಅಡಿ ಎತ್ತರವಾಗಿದೆ. ಇದನ್ನು ಹತ್ತುವುದು ಅಸಾಧ್ಯ ಎಂದೇ ಹೇಳಬಹುದು.