ಗುರುದ್ವಾರ ಅಝಮ್ ಘರ್ ಸಾಹಿಬ್ ಧಾರ್ಮಿಕವಾಗಿ ಸಿಖ್ಖರ ವಲಯದಲ್ಲಿ ಅತ್ಯಂತ ಮಹತ್ವವನ್ನು ಹೊಂದಿದೆ.
ಈ ಗುರುದ್ವಾರದಲ್ಲಿ ಮರದ ಪಾದರಕ್ಷೆಗಳ ಒಂದು ಜೋಡಿ ಮತ್ತು ಒಂದು ಕಠಾರಿಯನ್ನು ಕಾಣಬಹುದು. ಇಲ್ಲಿನ ನಂಬಿಕೆಗಳ ಪ್ರಕಾರ ಇದು ಸಿಖ್ಖರ 10ನೇ ಗುರು ಗುರುನಾನಕರಿಗೆ ಸೇರಿದ್ದೆಂದು ಹೇಳಲಾಗುತ್ತದೆ. ಪ್ರಸಿದ್ಧ ಕವಿ ಅಯೋಧ್ಯ ಸಿಂಗ್ ’ ಹರಿಊದ್’ ಸಹ ಇಲ್ಲಿಯೇ ಜನಿಸಿದ್ದು. ಸ್ಥಳೀಯರ ಪ್ರಕಾರ ಸೂಫಿ ಸಂತ ಶೇಖ್ ನಿಜಾಮ್-ಉದ್-ದಿನ್ ರ ಪಾರ್ಥೀವ ಶರೀರವನ್ನು ಇಲ್ಲಿಯೇ ಸಂಸ್ಕಾರ ಮಾಡಲಾಗಿದೆಯಂತೆ.