ಕೊಪ್ಪಳ ಪಟ್ಟಣದಲ್ಲಿನ ಒಂದು ಸಣ್ಣ ಹಳ್ಳಿ ಮುನಿರಾಬಾದ್. ಇದು ದಟ್ಟ ಹಸಿರು ಮತ್ತು ಪ್ರಶಾಂತ ವಾತಾವರಣಕ್ಕೆ ಪ್ರಸಿದ್ಧಿ. ತುಂಗಭದ್ರಾ ನದಿಗೆ ಮುನಿರಾಬಾದ್ ಸಮೀಪದಲ್ಲಿದೆ. ಮುನಿರಾಬಾದ್ನ ಸ್ಥಳೀಯ ಆಕರ್ಷಣೆಗಳೆಂದರೆ, ತುಂಗಭದ್ರಾ ಡ್ಯಾಂ, ಪಂಪ ಸರೋವರ, ಬಾಲಿ ಕಿಲಾ, ಹುಲ್ಗಮ್ಮ ಮಠ ಮಂದಿರ ಮತ್ತು ಋಷ್ಯಮೂಕ ಬೆಟ್ಟ.ಈ ಪ್ರದೇಶವು ರಾಮಾಯಣದಲ್ಲಿ ಹಲವು ಬಾರಿ ಉದ್ಧರಿಸಲ್ಪಟ್ಟಿದೆ. ರಾಮಾಯಣದಲ್ಲಿ ರಾಜನಾಗಿದ್ದ ಬಾಲಿ ಎಂಬ ರಾಜನ ಕೋಟೆ ಈ ಬಾಲಿ ಕಿಲವಾಗಿತ್ತು ಎಂದು ಹೇಳಲಾಗುತ್ತದೆ. ರಾಮಾಯಣದ ಪ್ರಕಾರ ಸೀತೆಯನ್ನು ಹುಡುಕುವುದಕ್ಕೆ ಸಹಾಯ ಕೇಳಲು ರಾಮನು ಹನುಮಂತನನ್ನು ಮೊದಲು ಭೇಟಿಯಾಗಿದ್ದು ಋಷ್ಯಮೂಕ ಬೆಟ್ಟದಲ್ಲಿ.ಹೊಸಪೇಟೆ ರೈಲ್ವೇ ಜಂಕ್ಷನ್ ಮುನಿರಾಬಾದ್ಗೆ ಸಮೀಪದ ರೈಲ್ವೇ ಸ್ಟೇಷನ್. ಮುನಿರಾಬಾದ್ಗೆ ಬರಲು ಹಂಪಿಯಿಂದ ರೈಲಿನ ಮೂಲಕ ಬರಬಹುದು. ಉತ್ತಮವೆಂದರೆ ಮುನಿರಾಬಾದ್ಗೆ ಬರುವುದಕ್ಕೆ ಆಟೋ ರಿಕ್ಷಾ ಮತ್ತು ಟ್ಯಾಕ್ಸಿಗಳು ಸೂಕ್ತ. ಮುನಿರಾಬಾದ್ಗೆ ಸೂಕ್ತ ರಸ್ತೆ ಸಂಪರ್ಕವಿದೆ. ಹೊಸಪೇಟೆ ಮತ್ತು ಕೊಪ್ಪಳಕ್ಕೆ ಮುನಿರಾಬಾದ್ನಿಂದ ಅನೇಕ ರಸ್ತೆಗಳ ಸಂಪರ್ಕವಿದೆ.