ಮರಣಕಟ್ಟೆಯು ಕುಂದಾಪುರದಿಂದ ಕೊಲ್ಲೂರಿಗೆ ಹೋಗುವ ಹಾದಿಯಲ್ಲಿ 16 ಕಿ.ಮೀ ದೂರದಲ್ಲಿರುವ ಸ್ಥಳವಾಗಿದೆ. ಇದು ಇಲ್ಲಿನ ದೇವಾಲಯಗಳಿಂದಾಗಿ ಪ್ರಸಿದ್ಧವಾಗಿದ್ದು ಪ್ರವಾಸಿಗರು ಒಮ್ಮೆ ಇಲ್ಲಿಗೆ ಭೇಟಿಕೊಡಬಹುದು. ಇಲ್ಲೊಂದು ಪುರಾತನ ಬ್ರಹ್ಮಲಿಂಗೇಶ್ವರ ದೇವಸ್ಥಾನವಿದ್ದು, ಮೂಕಾಂಬಿಕೆಯು ಮೂಕಾಸುರನನ್ನು ಇದೇ ಸ್ಥಳದಲ್ಲಿ ಸಂಹರಿಸಿ ನಂತರ ಮಾರಣ ಹೋಮವನ್ನು ನಡೆಸಿದಳೆಂದು ಹೇಳುತ್ತಾರೆ.ಈ ದೇವಾಲಯವು ಪೂರ್ವಾಭಿಮುಖವಾಗಿದ್ದು, ಗರ್ಭಗುಡಿ ಪಶ್ಚಿಮಾಭಿಮುಖವಾಗಿದೆ. ಈ ದೇವಾಲಯದಲ್ಲಿ ವಟ ಯಕ್ಷಿ, ಮಲೆಯಾಳಿ ಯಕ್ಷಿ ಮತ್ತು ದ್ವಾರಪಾಲಕರ ಮೂರ್ತಿಗಳಿವೆ. ಬ್ರಹ್ಮಲಿಂಗೇಶ್ವರ, ಶ್ರೀ ಹೈಗ್ಲುಲಿ ಮತ್ತು ಹುಲಿದೇವರು, ಚಿಕ್ಕಮ್ಮ ಮತ್ತು ಪರಿವಾರ ದೈವಗಳು ಇಲ್ಲಿನ ದೇವಾಲಯದಲ್ಲಿ ಪೂಜಿಸಲ್ಪಡುತ್ತವೆ. ಮಕರ ಸಂಕ್ರಾಂತಿ ಮತ್ತು ರಥೋತ್ಸವವನ್ನು ಇಲ್ಲಿ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತದೆ. ಪ್ರವಾಸಿಗರು ಈ ದೇವಾಲಯದಲ್ಲಿ ಬೆಳಗ್ಗೆ 6 ರಿಂದ 1ರವರೆಗೆ ಮತ್ತು ಮಧ್ಯಾಹ್ನ 3ರಿಂದ 9ರವರೆಗೆ ದರ್ಶನ ಪಡೆಯಬಹುದು.