ನಮಕ್ಕಲ್ ಜಿಲ್ಲೆಯ ವಿಲವಮ್ ನಗರದಲ್ಲಿದೆ ಸ್ವಾಮಿ ಪ್ರಣವಾನಂದ ಆಶ್ರಮ. ಮಾನವ ವಾಸಸ್ಥಳದಿಂದ ದೂರವಿರುವ ಈ ಆಶ್ರಮವು ದೈವತ್ವ ಹಾಗು ಶಾಂತತೆಯ ಸೆಲೆಯಾಗಿದೆ. ಆಶ್ರಮವನ್ನು ಸುತ್ತುವರೆದಿರುವ ಬೆಟ್ಟಗಳು, ಆಶ್ರಮದ ಅನಧಿಕೃತ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿವೆ. ಇವು ಜನಸಂದಣಿಯನ್ನು ಆಶ್ರಮದಿಂದ ಬೇರ್ಪಡಿಸುವ ಮೂಲಕ ಪ್ಲಾಸ್ಟಿಕ್ ಒಗೆಯುವುದು, ಧೂಮಪಾನಗಳಂತಹ ಇತರೆ ಮಾಲಿನ್ಯಗಳು ಆಶ್ರಮದ ಸುತ್ತ ಸಂಭವಿಸದಂತೆ ನೋಡಿಕೊಳ್ಳುತ್ತವೆ. ಮರದ ಶಾಖೆಗಳನ್ನು ಕಡಿಯುವುದು ಹಾಗು ಹೂವು ಹರಿಯುವುದನ್ನೂ ಸಹ ಇಲ್ಲಿ ನಿಷೇಧಿಸಲಾಗಿದೆ. ಹುಟ್ಟಿನಿಂದ ಫ್ರೆಂಚ್ ನಾಗರೀಕರಾಗಿದ್ದ ಪ್ರಣವಾನಂದ ಬ್ರಹ್ಮೇಂದ್ರ ಅವದುತ್ತ ಸ್ವಾಮಿಗಳು ಈ ಆಶ್ರಮದ ಮುಖ್ಯಸ್ಥರಾಗಿದ್ದರು.
ಸ್ವಾಮಿಗಳು ತಪಸ್ಸು ಮಾಡುತ್ತಿದ್ದ ಸಂಧರ್ಭದಲ್ಲಿ ಶಿವ ಕಾಣಿಸಿಕೊಂಡಿದ್ದರಿಂದ ಅವರು ಶಿವನ ದೇವಾಲಯವನ್ನು ನಿರ್ಮಿಸಿದರೆಂದು ಹೇಳಲಾಗುತ್ತದೆ. ಸ್ವಚ್ಛತೆ, ಅಡಿಗೆ, ತೋಟಗಾರಿಕೆಯಂತಹ ಸಾಂಘಿಕ ಕಾರ್ಯಗಳು ಹಾಗು ಆಧ್ಯಾತ್ಮಿಕ ಚರ್ಚೆ, ಧ್ಯಾನ ಮೊದಲಾವು ಆಶ್ರಮದ ದೈನಂದಿನ ಚಟುವಟಿಕೆಗಳಾಗಿವೆ.