ಅರಪಲೇಶ್ವರರ್ ದೇವಾಲಯವು ಒಂದು ಶಿವನ ದೇವಾಲಯವಾಗಿದ್ದು ಇದನ್ನು ವಲ್ವಿಲ್ ಓರಿ ಎಂಬ ರಾಜನು ತನ್ನ ಆಳ್ವಿಕೆಯಲ್ಲಿ ನಿರ್ಮಿಸಿದನು. ಈ ದೇವಾಲಯವು ಕ್ರಿಸ್ತ ಪೂರ್ವ 1 ಅಥವಾ 2 ನೇ ಶತಮಾನದಲ್ಲಿ ನಿರ್ಮಿತವಾಯಿತೆಂದು ನಂಬಲಾಗಿದೆ.ಈ ದೇವಾಲಯವು ಸಂಗಮರ ಕಾಲದಲ್ಲಿಯೇ ಇತ್ತೆಂಬ ನಂಬಿಕೆಯೂ ಇದೆ. ಈ ದೇಗುಲವು ಪೆರೈಕೊವಿಲೂರ್ ನಲ್ಲಿದೆ.ಇದರ ಸನಿಹದಲ್ಲೇ ಅತ್ಯದ್ಭುತವಾದ ಆಕಾಶಗಂಗೈ ಜಲಪಾತವೂ ಇರುವದರಿಂದ ಇದು ದೈವಿಕ ಹಾಗೂ ಪ್ರಾಕೃತಿಕ ಸೌಂದರ್ಯಗಳ ಸಮ್ಮಿಲಿತ ಕ್ಷೇತ್ರವಾಗಿದೆ.ಇತಿಹಾಸ ತಜ್ಞರ ಪ್ರಕಾರ ಅರಪಲೇಶ್ವರರ್ ದೇವಾಲಯದ ಆವರಣದಲ್ಲಿ ದೊರೆತಿರುವ ಶಿಲಾಶಾಸನಗಳು ಚೋಳರ ಕಾಲಕ್ಕೆ ಸೇರಿರುವಂತಹವಾಗಿವೆ.
ಈ ಗುಡಿಯಲ್ಲಿರುವ ಶಿವಲಿಂಗವು ಮೊದಲು ಬಿದ್ದಿದ್ದು ರೈತನೊಬ್ಬನ ಕಣ್ಣಿಗೆ. ಅವನು ಹೊಲದಲ್ಲಿ ಉಳಿಮೆ ಮಾಡುತ್ತಿದ್ದಾಗ, ನೇಗಿಲಿಗೆ ಕಲ್ಲೊಂದು ತಾಕಿತು. ಏನೆಂದು ನೋಡಿದಾಗ ಅದು ಶಿವಲಿಂಗವಾಗಿದ್ದು ನೇಗಿಲು ಬಡೆದಿದ್ದರಿಂದ ಅಲೊಂದು ಗಾಯವಾಗಿ ರಕ್ತ ಜಿನುಗುತ್ತಿತ್ತು. ಇಂದಿಗೂ ಅರಪಲೇಶ್ವರರ್ ದೇವಾಲಯದಲ್ಲಿರುವ ಲಿಂಗದ ಹಣೆಯ ಮೇಲೆ ನೆಗಿಲು ಬಡಿದ ಗಾಯವಿದೆ. ಎಂಬ ಪೌರಾಣಿಕ ದಂತಕಥೆಯನ್ನು ಕೇಳಿದರೆ ಎಂಥವರಿಗೂ ಒಮ್ಮೆ ಕ್ಷೇತ್ರಕ್ಕೆ ಬೇಟಿನೀಡಿ ಪುನೀತರಾಗುವ ಹಂಬಲವಾಗದಿರದು.ಶೋಧಿಸಿ ಹೊರತೆಗೆದಿರುವ ಬೃಹತ್ ಶಿಲಾ ಸಮಾಧಿಯು ಇಲ್ಲಿರುವ ಮತ್ತೊಂದು ಐತಿಹಾಸಿಕ ಸ್ಮಾರಕವಾಗಿದೆ. ಅಲ್ಲದೆ, ಅರಪಲೇಶ್ವರರ್ ದೇವಾಲಯದಿಂದ ರಾಸಿಪುರಂನಲ್ಲಿರುವ ಶಿವನ ದೇವಾಲಯಕ್ಕೆ ರಹಸ್ಯ ಮಾರ್ಗವೊಂದಿತ್ತೆಂಬುದು ಕುತೂಹಲಕರವಾದ ವಿಷಯ.