ಸಸ್ತಮಕೋಟಾ ಶುದ್ಧನೀರಿನ ಕೆರೆಯಾಗಿದ್ದು, ಅಪಾರ ಸಂಖ್ಯೆಯ ವೀಕ್ಷಕರನ್ನು ಸೆಳೆಯುತ್ತಿದೆ. ಕೆರೆಯ ಸೌಂದರ್ಯ ಹಾಗೂ ಇಲ್ಲಿನ ಸೌಲಭ್ಯ ಮೆಚ್ಚಿ ಜನ ಹೆಚ್ಚಾಗಿ ಬರುತ್ತಾರೆ. ಪುರಾಣ ಪ್ರಸಿದ್ಧ ಅಯ್ಯಪ್ಪನ ದೇವಾಲಯ ಇಲ್ಲಿದ್ದು, ದೇವಾಲಯದ ಪಕ್ಕದಲ್ಲೇ ಕೆರೆಯ ತೆರೆ ಬಂದು ಅಪ್ಪಳಿಸುತ್ತಿರುತ್ತದೆ. ಕೆರೆಯು ಕುಡಿಯುವ ನೀರನ್ನು ಒದಗಿಸುವ ಮೂಲವಾಗಿದ್ದು, ಕೊಲ್ಲಂ ಸೇರಿದಂತೆ ಇತರೆಡೆಗೂ ಇಲ್ಲಿಂದಲೇ ಮೀನುಗಳ ಪೂರೈಕೆಯಾಗುತ್ತದೆ.
ಕೇರಳದಲ್ಲಿ ಮೀನುಗಾರಿಕೆಗೆ ಬಳಕೆಯಾಗುವ ಶುದ್ಧ ನೀರಿನ ಕೆರೆಯಲ್ಲಿ ಇದು ಅತಿ ದೊಡ್ಡದು. ಈ ಜಲಭೂಮಿಗೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿದ್ದು, 2002 ರಲ್ಲಿ ನಡೆದ ರಾಮಸಾರ ಕನ್ವೆನ್ಶನ್ ಆದ ನಂತರ. ಕೊಲ್ಲಂನಿಂದ ಇದು ಕೇವಲ 25 ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ರಸ್ತೆ ಹಾಗೂ ಜಲಯಾನ ಎರಡೂ ಮಾರ್ಗದಲ್ಲಿ ಬರಲು ಅವಕಾಶ ಇದೆ.
ಈ ಕೆರೆಯ ನೀರು ಪ್ರದೇಶದ ಮಣ್ಣಿನ ಅನುಕೂಲಕ್ಕೆ ಬಳಕೆಯಾಗುತ್ತದೆ. ಕೆರೆಯ ನೀರಿನ ಪ್ರಮುಖ ಪಾಲು ಪ್ರದೇಶದ ಕೃಷಿ ಚಟುವಟಿಕೆಗೆ ಬಳಕೆಯಾಗುತ್ತದೆ. ಕೆರೆಯ ಸುತ್ತಲೂ ಇರುವ ಗುಡ್ಡ, ಬೆಟ್ಟಗಳು ಇದರ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಇದರಿಂದ ಇದೊಂದು ಪ್ರವಾಸಿತಾಣವಾಗಿಯೂ ಜನಪ್ರಿಯವಾಗಿದೆ.