ಕೊಲ್ಹಾಪುರಿನಲ್ಲಿರುವ ಜ್ಯೋತಿಬಾ ದೇವಾಲಯವು ಕೆದಾರನಾಥ ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿದ್ದು 3000 ಅಡಿಗಳ ಎತ್ತರದಲ್ಲಿ ನಿರ್ಮಿಸಲಾಗಿದೆ. ಚಾಲ್ತಿಯಲ್ಲಿರುವ 12 ಜ್ಯೋತಿರ್ಲಿಂಗಗಳಲ್ಲಿ ಇದೂ ಒಂದಾಗಿದೆ.
ಜ್ಯೋತಿಬಾ ದೇವಾಲಯವು ವಾಡಾ ರತ್ನಾಗಿರಿ ಎಂತಲೂ ಜನಪ್ರಿಯವಾಗಿದ್ದು, ರತ್ನಾಸುರನೆಂಬ ಅಸುರನನ್ನು ಕೊಂದ, ಬ್ರಹ್ಮ,ವಿಷ್ಣು, ಮಹೇಶ್ವರರ ಭಯಂಕರವಾದ ರೂಪವೆಂದು ನಂಬಲಾಗಿದೆ.
ಕೊಲ್ಹಾಪುರದಿಂದ 15 ಕಿ.ಮೀ ದೂರವಿರುವ ಈ ಯಾತ್ರಾ ಕೇಂದ್ರವು, ಭಕ್ತರಲ್ಲಿ ಅತಿ ಮಹತ್ವವಾಗಿದ್ದು, ಹಿಂದು ಕ್ಯಾಲೇಂಡರನ ಪ್ರತಿ ಚೈತ್ರ, ವೈಶಾಖ ಮಾಸಗಳ ಪೂರ್ಣ ಹುಣ್ಣಿಮೆಯ ದಿನಗಳಂದು ವಿಜ್ರಂಭಣೆಯಿಂದ ಜಾತ್ರೆಯನ್ನು ಏರ್ಪಡಿಸಲಾಗುತ್ತದೆ.