ಕೋಲಾರದ ಮೂಲಕ ಹಾದು ಹೋಗುವ ಪ್ರವಾಸಿಗರು ಒಮ್ಮೆ ವಿಧುರಾಶ್ವತ್ಥಕ್ಕೆ ಭೇಟಿಕೊಡಬಹುದು. ಈ ಸ್ಥಳವು ಗೌರಿಬಿದನೂರು ತಾಲ್ಲೂಕು ಕೇಂದ್ರದಿಂದ 10 ಕಿ.ಮೀ ದೂರದಲ್ಲಿದೆ. ಇದು ಭಾರತದ ಪವಿತ್ರ ಸ್ಥಳಗಳಲ್ಲಿ ಒಂದು ಎಂದು ಖ್ಯಾತಿ ಪಡೆದಿದೆ. ಈ ಸ್ಥಳಕ್ಕೆ ಹೋದಾಗ ಪ್ರವಾಸಿಗರು ಇಲ್ಲಿ ಮಹಾಭಾರತ ಕಾಲದಲ್ಲಿ (ದ್ವಾಪರ ಯುಗದಲ್ಲಿ) ಮೈತ್ರೇಯ ಮಹಾಮುನಿ ನೆಟ್ಟ ಪವಿತ್ರ ಅಶೋಕ ವೃಕ್ಷವನ್ನು ಕಾಣಬಹುದು. ಕೃಷ್ಣನ ಪರಮಭಕ್ತನಾದ ವಿದುರನು ಇಲ್ಲಿ ಪೂಜೆಗಳನ್ನು ಮಾಡಿದನೆಂಬ ಕಾರಣದಿಂದ ಈ ಪುಣ್ಯಕ್ಷೇತ್ರ ವಿದುರಾಶ್ವತ್ಥವೆಂಬ ಹೆಸರು ಪಡೆಯಿತು.ಅಶೋಕ ವೃಕ್ಷವು ಮಾನವನ ಜೀವನಕ್ಕೆ ಸಂಬಂಧಿಸಿದಂತೆ ನಾಲ್ಕು ವಿಶೇಷ ಲಕ್ಷಣಗಳನ್ನು ಒಳಗೊಂಡಿದೆ. ಈ ಮರದ ಕೆಲವು ಭಾಗಗಳನ್ನು ಔಷಧಿಗಳ ಸಲುವಾಗಿ ಬಳಸುತ್ತಾರೆ. ಈ ಸ್ಥಳವು 1938ರಲ್ಲಿ ನಡೆದ ಸತ್ಯಗ್ರಹ ಚಳವಳಿಯಿಂದಾಗಿ ಐತಿಹಾಸಿಕವಾಗಿ ಸಹಾ ಮಹತ್ವ ಪಡೆದಿದೆ. ವಿದುರಾಶ್ವತ್ಥವು ತನ್ನ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವಗಳಿಂದಾಗಿ ಧರ್ಮ, ಮರ್ಮ ಮತ್ತು ದೇಶಪ್ರೇಮ ಕೂಡುವ ಸಂಗಮ ಕ್ಷೇತ್ರವೆಂದು ಕರೆಯಲಾಗುತ್ತಿದೆ.ಇಲ್ಲಿ ನಡೆಯುವ ರಥೋತ್ಸವದ ಸಮಯದಲ್ಲಿ ಈ ಪುಣ್ಯಸ್ಥಳಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇದು ಚೈತ್ರ ಮಾಸದ ಪೌರ್ಣಮಿಯ ದಿನ ಜರುಗುತ್ತದೆ. ಇಲ್ಲಿನ ದೇವಾಲಯದಲ್ಲಿ ಹಲವಾರು ವಿವಾಹ ಸಮಾರಂಭಗಳು ನೆರವೇರುತ್ತಲೆ ಇರುತ್ತವೆ. ಪ್ರವಾಸಿಗರು ದೇವಾಲಯದ ಹಿಂಭಾಗದಲ್ಲಿರುವ ’ಸತ್ಯಗ್ರಹ ಸ್ಮಾರಕ’ಕ್ಕೆ ಸಹಾ ಭೇಟಿಕೊಡಬಹುದು.