ಶೃಂಗಪುರಂ ಮಹಾದೇವ ದೇವಾಲಯವು ಕೊಡುಂಗಲ್ಲೂರಿಗೆ ಸಮೀಪದಲ್ಲಿರುವ ಪ್ರಸಿದ್ಧ ಶಿವನ ದೇವಾಲಯವಾಗಿದೆ. ಶೃಂಗಪುರಂ (ಶೃಂಗನ ನಾಡು) ಎಂಬ ಹೆಸರು ಬರಲು ಕಾರಣ ಋಷ್ಯಶೃಂಗನೆಂಬ ಮುನಿಯು ಈ ದೇವಾಲಯದಲ್ಲಿ ಶಿವಲಿಂಗವನ್ನು ಸ್ಥಾಪಿಸಿದನಂತೆ, ಹಾಗಾಗಿ ಇದಕ್ಕೆ ಈ ಹೆಸರು ಬಂದಿತೆಂದು ಪುರಾಣಗಳು ಸಾರುತ್ತವೆ.
ಈ ದೇವಾಲಯವನ್ನು ಇನ್ನಿತರ ದೇವಾಲಯಗಳಿಂದ ಪ್ರತ್ಯೇಕಿಸುವ ಅಂಶವೆಂದರೆ ಇಲ್ಲಿರುವ ಶಿವನ ವಿಗ್ರಹವು ಪಾರ್ವತಿಯಿಂದ ಪರಿತ್ಯಕ್ತನಾಗಿರುವಂತೆ ಕಾಣುತ್ತದೆ. ಈ ಶಿವನ ವಿಗ್ರಹವು ಪಾರ್ವತಿಯ ಆತ್ಮಾರ್ಪಣೆಯ ನೋವನ್ನು ಅನುಭವಿಸುತ್ತಿರುವ ಮುಖಭಾವವನ್ನು ಕಾಣುವಂತೆ ಕಡೆಯಲಾಗಿದೆ. ಇಲ್ಲಿನ ಕಲಾತ್ಮಕ ಶಾಸನಗಳು 10 ರಿಂದ 11 ನೆಯ ಶತಮಾನಗಳಷ್ಟು ಹಿಂದಿನ ಇತಿಹಾಸವನ್ನು ಸಾರುತ್ತವೆ.
ಈ ದೇವಾಲಯ ಸಂಕೀರ್ಣವು ನಡಪಂಡಲೊಂದಿಗೆ ಹೆಂಚುಗಳಿಂದ ಕೂಡಿದ ಮಾಡು, ಧ್ವಜ ಸ್ತಂಭ,ಪ್ರಾಕಾರ ಮತ್ತು ಗರ್ಭಗುಡಿಗಳನ್ನು ಹೊಂದಿದೆ. ಶಿವರಾತ್ರಿಯು ಇಲ್ಲಿ ಅದ್ಧೂರಿಯಾಗಿ ಆಚರಿಸಲ್ಪಡುವ ಹಬ್ಬವಾಗಿದೆ. ಆಗ ಕೇರಳದ ಇನ್ನಿತರ ಭಾಗಗಳಿಂದ ಭಕ್ತಾಧಿಗಳು ಇಲ್ಲಿಗೆ ಆಗಮಿಸುತ್ತಾರೆ.ಕೊಡುಂಗಲ್ಲೂರ್ – ಪರವುರ್ ರಸ್ತೆಯಲ್ಲಿ ನೆಲೆಗೊಂಡಿರುವ ಈ ಶೃಂಗಪುರಂ ಮಹಾದೇವ ದೇವಾಲಯಕ್ಕೆ ರಸ್ತೆ ಮಾರ್ಗವಾಗಿ ಸುಲಭವಾಗಿ ತಲುಪಬಹುದು.