ಕುರಿಂಜಿ ಆಂಡವರ್ ದೇವಾಲಯವು ಬಸ್ ನಿಲ್ದಾಣದಿಂದ 4 ಕಿ.ಮೀ ದೂರದಲ್ಲಿದೆ. 12 ವರ್ಷಗಳಿಗೆ ಒಮ್ಮೆ ಮಾತ್ರ ಅರಳುವ ಪ್ರಸಿದ್ಧವಾದ ಕುರಿಂಜಿ ಪುಷ್ಪವು ಈ ಪ್ರಾಂತ್ಯದಲ್ಲಿ ಅರಳುತ್ತದೆ. ಈ ದೇವಾಲಯವನ್ನು ಸುಬ್ರಹ್ಮಣ್ಯ ಸ್ವಾಮಿಗೆ ಅರ್ಪಿಸಲಾಗಿದೆ. ಈ ದೇವರನ್ನು ಶ್ರೀ ಕುರಿಂಜಿ ಈಶ್ವರನ್ ಎಂದು ಸಹ ಕರೆಯುತ್ತಾರೆ. ಈ ದೇವಾಲಯವನ್ನು ಒಬ್ಬ ಯೂರೋಪಿಯನ್ ಮಹಿಳೆ 1936ರಲ್ಲಿ ನಿರ್ಮಿಸಿದಳಂತೆ. ಆ ಮಹಿಳೆಯು ಹಿಂದೂವೊಬ್ಬನನ್ನು ಮದುವೆಯಾಗಿ ಹಿಂದೂ ಧರ್ಮವನ್ನು ಸ್ವೀಕರಿಸಿದಳಂತೆ. ಹಾಗಾಗಿ ಆಕೆಯನ್ನು ಲೇಡಿ ರಾಮನಾಥನ್ ಎಂದು ಕರೆಯುತ್ತಿದ್ದರಂತೆ. ಇಂದು ಈ ದೇವಾಲಯವು ಅರುಳ್ಮಿಘು ದಂಡಾಯುಧಪಾಣಿ ಸ್ವಾಮಿ ತಿರು ಕೋವಿಲ್ ಒಡೆತನಕ್ಕೆ ಒಳಪಟ್ಟಿದೆ.