ಈ ಸರೋವರವು ವಡ್ತಲ್ ಹಳ್ಳಿಯಲ್ಲಿದ್ದು, ಖೇಡಾದ ಪ್ರವಾಸಿ ಆಕರ್ಷಣೆಗಳಲ್ಲೊಂದು . ಕೃಷ್ಣನೊಂದಿಗೆ ಈ ಮಾರ್ಗವಾಗಿ ಹೋಗುತ್ತಿರುವಾಗ ಭೀಮಸೇನು, ಈ ಪ್ರದೇಶದ ಕಾಡು ಪ್ರಾಣಿಗಳು ಮತ್ತು ನಿವಾಸಿಗಳಿಗೆ ಸಹಾಯಕ್ಕಾಗಿ ಅಲ್ಲಿದ್ದ ಸಣ್ಣ ಕೊಳವನ್ನು ಅಗೆದು ಒಂದು ದೊಡ್ಡ ಸರೋವರವಾಗಿಸಿದನು. ಎಂಬುದು ಈ ಸರೋವರದ ಬಗೆಗಿನ ದಂತಕಥೆ. ಡಕೊರ್ ದೇವಾಲಯದ ಎದುರು ಭಾಗದಲ್ಲಿದೆ ಮತ್ತು ದ್ವಾರಕೆಯ ಗೋಮತಿನದಿಯಿಂದ ಈ ಹೆಸರನ್ನು ಪಡೆದಿದೆ.
ಪ್ರಸ್ತುತ 230 ಹೆಕ್ಟೇರ್ ಪ್ರದೇಶವನ್ನು ಆವರಿಸಿರುವ ಗೋಮತಿ ಸರೋವರದ ತೀರದಲ್ಲಿ ಯಾತ್ರಿಗಳಿಗೆ ವಸತಿ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಈ ಸರೋವರದಲ್ಲಿ ಮಖನಿ ಆರೋ , ಕಾಲೇಶ್ವರ ಮಹಾದೇವ್ , ಭತ್ತ್ಜಿಮಹಾರಾಜ್ ಮತ್ತು ದಾಂಕಾಂಥ ಮಹಾದೇವ್ ಎಂಬ ನಾಲ್ಕು ಪ್ರಮುಖ ದಿಬ್ಬಗಳಿವೆ. ಇವುಗಳಲ್ಲದೇ ಈ ಸರೋವರವು ದೋಣಿ ವಿಹಾರ ಮತ್ತು ಆಮೆಗೆ ಆಹಾರ ನೀಡುವುದಕ್ಕೆ ಕೂಡ ಪ್ರಸಿದ್ಧವಾಗಿದೆ .