ಪ್ರಸಿದ್ಧ ಚಲನಚಿತ್ರ ಹಿನ್ನೆಲೆ ಗಾಯ ಕಿಶೋರ್ ಕುಮಾರ್ ಗಂಗೂಲಿಯ ಸ್ಮರಣಾರ್ಥವಾಗಿ ಈ ಸ್ಮಾರಕವನ್ನು ನಿರ್ಮಿಸಲಾಗಿದೆ. ಕಿಶೋರ್ ಕುಮಾರ್ ಮತ್ತು ಖಾಂಡ್ವಾ ನಡುವೆ ಒಂದು ವಿಶೇಷವಾದ ಬಾಂಧವ್ಯವಿದ್ದು, ಸುಪ್ರಸಿದ್ಧ ಗಾಯಕನ ಹುಟ್ಟಿದ್ದು ಇದೇ ಊರಲ್ಲಿ. ಇದರ ಅಡಿಪಾಯ ಹಾಕಿದವರು ಕಿಶೋರ್ ಕುಮಾರ್ ಅವರ ಅಣ್ಣ ಅಶೋಕ್ ಕುಮಾರ್ ಅವರು. ಸ್ಮಾರಕವನ್ನು ಕಿಶೋರ್ ಕುಮಾರ್ ಅವರ ನೆನಪಲ್ಲಿ ನಿರ್ಮಿಸಲಾಗಿದ್ದರೂ, ಸಭಾಮಂದಿರಕ್ಕೆ ಕಿಶೋರ್ ಅವರ ತಾಯಿ-ತಂದೆಯಾದ ಗೌರಿದೇವಿ ಮತ್ತು ಕುಂಜಿಲಾಲ್ ಗಂಗೋಪಾಧ್ಯಾಯ್ ಅವರ ಹೆಸರನ್ನು ಇಡಲಾಗಿದೆ.
ಗೌರಿ ಕುಂಜ್ ಕಟ್ಟಡವನ್ನು ಸುಪ್ರಸಿದ್ಧ ನಾಯಕ ನಟ ರಾಜೇಶ್ ಖನ್ನಾ ಅವರು 1998ರಲ್ಲಿ ಅನಾವರಣಗೊಳಿಸಿದರು. ಎಲ್ಲ ತರಹದ ಕಲೆ ಹಾಗು ಸಾಸಂಸ್ಕೃತಿಕ ಚಟುವಟಿಕೆಗಳಿಗೆ ಇದು ಉತ್ತಮ ವೇದಿಕೆಯಾಗಿದೆ. ಮಧ್ಯಪ್ರದೇಶ ಸರಕಾರ ಹಾಗು ಇಲ್ಲಿಯ ಮುನಿಸಿಪಲ್ ಕಾರ್ಪೋರೇಷನ್ ಇದನ್ನು ಸಂರಕ್ಷಿಸುತ್ತಿದೆ. ಇದು ರೈಲು ನಿಲ್ದಾಣಕ್ಕೆ ತೀರ ಹತ್ತಿರವಿದ್ದು ಐದು ನಿಮಿಷದಲ್ಲಿ ಕಾಲ್ನಡಿಗೆಯಲ್ಲಿ ತಲುಪಬಹುದಾಗಿದೆ.
ನಿಮಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಒಲವಿದ್ದರೆ ಅಥವಾ ನೀವು ಸಂಗೀತ ಪ್ರೇಮಿಯಾಗಿದ್ದರೆ ಇಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲೇಬೇಕು.