ಖಾಂಡ್ವಾದ ನೈರುತ್ಯ ಭಾಗದಲ್ಲಿ ದಾದಾ ದರಬಾರ್ ಇದೆ. ಇದು ಪವಿತ್ರವಾದ ಪೂಜಾಸ್ಥಳ ಎನಿಸಿಕೊಂಡಿದೆ. ಪೂಜ್ಯ ಸ್ವಾಮಿಗಳಾದ ಶ್ರೀ ಹರಿಹರಾನಂದಜಿ ಮಹಾರಾಜ್ ಹಾಗು ಪೂಜ್ಯ ಶ್ರೀ ಕೇಶವಾನಂದಜಿ ಮಹಾರಾಜ್ ಅವರ ಪವಿತ್ರವಾದ ಸಮಾಧಿಗಳಿವೆ. ಇವರಿಬ್ಬರನ್ನು ಛೋಟೆ ದಾದಾಜಿ ಹಾಗು ಬಡೇ ದಾದಾಜಿ ಎಂದೇ ಸಂಬೋಧಿಸುತ್ತಾರೆ.
ಈ ಸಂತರ ಸಮಾಧಿಗಳನ್ನು 1930ರಲ್ಲಿ ಅವರ ಸ್ಮರಣಾರ್ಥವಾಗಿ ಸ್ಥಾಪಿಸಲಾಯಿತು. ಬೈರಾಗಿಯಾಗಿದ್ದ ಬಡೇ ದಾದಾಜಿಯವರು ಧುನಿ ಎಂದು ಕರೆಯಲಾಗುವ ಪವಿತ್ರ ಅಗ್ನಿಯ ಮುಂದೆ ತಪಸ್ಸು ಮಾಡಿದ್ದರು. ಇದಕ್ಕಾಗಿ ಇವರಿಗೆ ದಾದಾ ಧುನಿವಾಲಾ ಎಂಬ ಹೆಸರೂ ಇದೆ. ಹಾಗಾಗಿ ಈ ಪವಿತ್ರ ಸ್ಥಳವು ದಾದಾ ಧುನಿವಾಲಾ ದರಬಾರ್ ಎಂದೂ ಹೆಸರು ಪಡೆದಿದೆ.
ಗುರು ಪೂರ್ಣಿಮಾದ ಶುಭದಿನದಂದು ವಾರ್ಷಿಕ ಜಾತ್ರೆಯನ್ನು ಆಯೋಜಿಸಲಾಗುತ್ತದೆ. ದೂರದೂರದಿಂದ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ರೈಲು ನಿಲ್ತಾಣದಿಂದ ಕೇವಲ 3 ಕಿ.ಮೀ. ದೂರದಲ್ಲಿರುವ ದಾದಾ ದರಬಾರ್ಗೆ ತಲುಪುವುದು ಬಹಳ ಸುಲಭ. ಬಸ್ ನಿಲ್ದಾಣದಿಂದಲೂ ಈ ಸ್ಥಳ ಸಮೀಪದಲ್ಲಿದೆ.