ಪ್ರವಾಸಿಗರಿಗೆ, ಕೇದಾರನಾಥವು ಅತ್ಯಾಕರ್ಷಕ ಟ್ರೆಕ್ಕಿಂಗ್ ಅವಕಾಶವನ್ನು ನೀಡುತ್ತದೆ. ದೇವಾಲಯವು ಯಾವುದೇ ಮಾರ್ಗದಲ್ಲಿ ನೇರ ಸಂಪರ್ಕವನ್ನು ಹೊಂದಿಲ್ಲ. ಇದರಿಂದ ಪ್ರವಾಸಿಗರು ಟ್ರೆಕ್ಕಿಂಗ್ ಅಥವಾ ಹೆಲಿಕ್ಯಾಪ್ಟರ್ ಮೂಲಕವೇ ಇಲ್ಲಿಗೆ ಆಗಮಿಸಬೇಕು. ಗೌರಿಕುಂಡದಿಂದ ಕೇದಾರನಾಥ ದೇವಾಲಯ 14 ಕಿ.ಮೀ. ದೂರದಲ್ಲಿದೆ. ಇಲ್ಲಿನ ಜನಪ್ರಿಯ ಚಾರಣ ಮಾರ್ಗವು, ಕೇದಾರನಾಥದಿಂದ ಆರಂಭವಾಗಿ ಭಾಗೀರಥಿ ನದಿ ತೀರದಗುಂಟ ಸಾಗುತ್ತ ಲತಾ ಎಂಬ ದಟ್ಟಾರಣ್ಯವನ್ನು ತಲುಪುವುದು. ಲತಾದಿಂದ ಗಂಗೋತ್ರಿಗೆ ತೆರಳುವುದು ಇನ್ನೊಂದು ಮಾರ್ಗ. ಇದು ಐದು ಗಂಟೆ ಅವಧಿಯನ್ನು ಪಡೆಯುತ್ತದೆ.
ಗಂಗೋತ್ರಿಯಿಂದ ಮುಂದಿನ ಹಂತದ ಟ್ರೆಕ್ಕಿಂಗ್ ಆರಂಭವಾಗುತ್ತದೆ. ಇದು ಗಂಗೋತ್ರಿಯ ಹಿಮಾಚ್ಛಾದಿತ ಪ್ರದೇಶವನ್ನು ಹಾದು ಅತ್ಯಾಕರ್ಷಕ ಹಸಿರು ಹಾಗೂ ಹಿಮದಿಂದ ಕೂಡಿರುವ ತಾಣವಾದ ತಪೋವನವನ್ನು ತಲುಪುತ್ತದೆ. ಇದಲ್ಲದೇ ಕೇದಾರನಾಥ-ವಾಸುಕಿ ತಾಲ್ ಟ್ರೆಕ್ಕಿಂಗ್ ಮಾರ್ಗವೂ ಸಾಕಷ್ಟು ಮಜಾ ಕೊಡುತ್ತದೆ. ಈ ಎಲ್ಲಾ ಮಾರ್ಗದಲ್ಲಿ ತೆರಳುವಾಗಲೂ ಪ್ರವಾಸಿಗರು ಹಸಿರು ಕಾಡಿನ ಸೌಂದರ್ಯ ಸವಿಯಬಹುದಾಗಿದೆ. ಇದರೊಂದಿಗೆ ಮಂದಾಕಿನಿ ಕಣಿವೆ, ಚೌಖಂಬಾ ಬೆಟ್ಟದ ತುದಿಗಳನ್ನು ವೀಕ್ಷಿಸುವ ಅವಕಾಶ ಇಲ್ಲಿ ಸಿಗುತ್ತದೆ.