ಭೈರವನಾಥ ದೇವಾಲಯವು ಕೇದಾರನಾಥ ದೇವಾಲಯದಿಂದ ಅರ್ಧ ಕಿ.ಮೀ. ದೂರದಲ್ಲಿದೆ. ಇದು ಹಿಂದು ದೇವರಾದ ಭೈರವನ ಆಲಯವಾಗಿದೆ. ಹಿಂದು ದೇವರಾದ ಶಿವನ ಗಣಗಳಲ್ಲೊಬ್ಬ. ರಜಪೂತ ಅರಸು ವಂಶಸ್ಥರ ಮೊದಲ ಅರಸ ಅಥವಾ ರಾವಲ್ ಆಗಿದ್ದ ಶಾ. ಬೈಕುಂಡ ಈ ದೇವಾಲಯದಲ್ಲಿ ಭೈರವ ಮೂರ್ತಿಯನ್ನು ಕ್ರಿ.ಪೂ 3001ರಲ್ಲಿ ಪ್ರತಿಷ್ಠಾಪಿಸಿದ. ಸ್ಥಳೀಯರು ಈ ದೇವರನ್ನು ಕ್ಷೇತ್ರಪಾಲ ಅಥವಾ ಗುರ್ದಿನ ಅಂತ ಆಚರಿಸುತ್ತಾರೆ. ಇತಿಹಾಸದ ಪ್ರಕಾರ, ಚಳಿಗಾಲದಲ್ಲಿ ಕೇದಾರನಾಥ ದೇವಾಲಯ ಮುಚ್ಚಿದ ಸಂದರ್ಭದಲ್ಲಿ ಭೈರವನಾಥ ದೇವರು ಈ ಪ್ರದೇಶವನ್ನು ಕಾಯುತ್ತಾನೆ ಎಂದು ನಂಬಲಾಗಿದೆ.