ಹಳೆಯ ಕೌಶಂಬಿಯ ಇತಿಹಾಸ ರಾಮಾಯಣ ಮತ್ತು ಮಹಾಭಾರತಕ್ಕಿಂತಲೂ ಹಳೆಯ ಕಾಲಕ್ಕೆ ಇದೆ. ಇದು ವತ್ಸ ಮಹಾ ಜನಪದನ ರಾಜಧಾನಿಯಾಗಿತ್ತು ಇದು ಮಹಾಭಾರತದ ಹದಿನಾರು ಪ್ರದೇಶಗಳಲ್ಲಿ ಒಂದಾಗಿತ್ತು. ಇದನ್ನು ಪುರಾಣ, ರಾಮಾಯಣ ಮತ್ತು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ. ಚೆದಿ ರಾಜ ಕುಶಂಭ ನಿಂದ ಈ ನಗರವನ್ನು ರಚನೆ ಮಾಡಲಾಗಿತ್ತು.
ಕೌಶಂಬಿಯನ್ನು ಬುದ್ಧನ ಸಮಯದ ಬೌದ್ಧಧರ್ಮದ ಪ್ರಮುಖ ನಗರಗಳಲ್ಲಿ ಒಂದು ಎಂದು ನಂಬಲಾಗಿತ್ತು. ಇದು ವ್ಯಾಪಾರಿಗಳಿಗೂ ಪ್ರಮುಖ ಮಾರ್ಗವಾಗಿತ್ತು ಕಾರಣ ಎಲ್ಲಾ ಪ್ರಮುಖ ವ್ಯಾಪಾರದ ರಸ್ತೆಗಳು ಇಲ್ಲಿಂದಲೇ ಹಾದುಹೋಗುತ್ತಿದ್ದವು.
ಇಲ್ಲಿ ನಡೆಸಲಾದ ಉತ್ಖನನದ ಸಮಯದಲ್ಲಿ ಹಲವು ಹಳೆಯ ನಾಣ್ಯಗಳನ್ನೂ, ಶಾಸನಗಳನ್ನೂ, ಮೂರ್ತಿಗಳನ್ನೂ ಸ್ತೂಪಗಳನ್ನೂ ಪತ್ತೆಹಚ್ಚಲಾಗಿತ್ತು. ಇವೆಲ್ಲವೂ ಇಲ್ಲಿನ ಐತಿಹಾಸಿಕ ಶ್ರೀಮಂತಿಗೆಕೆ ಸಾಕ್ಷಿಯಾಗಿವೆ. ಇವುಗಳಲ್ಲಿ ಕೆಲವು ಪ್ರಮುಖವಾದುವುಗಳೆಂದರೆ ಅಶೋಕ ಸ್ಥಂಭ, ಜೈನ ಬಸದಿ, ಕಲ್ಲಿನ ಕೋಟೆ ಗೋಸಿತಾರಾಮ ಸಮುದಾಯ ಗೃಹ
ಬುದ್ಧ ಜ್ಞಾನೋದಯವಾದ ಬಳಿಕೆ ಆರನೆಯ ಹಾಗೂ ಒಂಬತ್ತನೆಯ ವರ್ಷಗಳಲ್ಲಿ ಇಲ್ಲಿಗೆ ಭೇಟಿ ನೀಡಿದ್ದನು ಎಂದು ನಂಬಲಾಗಿದೆ. ಹೀಗಾಗಿ ಬೌದ್ಧ ಧರ್ಮೀಯರಿಗೆ ಹಳೆಯ ಕೌಶಂಬಿ ಬಹಳವೇ ಪ್ರಮುಖವಾದ ನಗರವಾಗಿದೆ.