ಬೌದ್ಧ ಧರ್ಮದವರಿಗೆ ಕೌಶಂಬಿ ಒಂದು ಅತ್ಯಂತ ಪವಿತ್ರವಾದ ಸ್ಥಳವಾಗಿದೆ. ಉತ್ತರ ಪ್ರದೇಶದಲ್ಲಿರುವ ಈ ಸ್ಥಳದಲ್ಲಿ ವರ್ಷಪೂರ್ತಿ ಪ್ರವಾಸಿಗಳು ಇರುತ್ತಾರೆ. ಇಲ್ಲಿ ಬುದ್ಧನು ತನ್ನ ಹಲವು ಧರ್ಮಬೋಧನೆಗಳನ್ನು ಮಾಡಿದ್ದನು ಎಂದು ನಂಬಲಾಗಿದೆ. ಈ ನಗರವು ನಿರ್ಲಕ್ಷದ ಕಾರಣದಿಂದ ಬಹಳ ಕೆಟ್ಟುಹೋಗಿದ್ದರೂ ಕೋಟೆಗಳು, ಸ್ತೂಪಗಳು ಮತ್ತು ಇನ್ನಿತರ ಹಲವು ಹಳೆಯ ಸ್ಮಾರಕಗಳನ್ನು ನಾವು ಇಂದಿಗೂ ಕಾಣಬಹುದಾಗಿದೆ. ಈ ನಗರವು ಯಮುನಾ ನದಿಯ ತಟದಲ್ಲಿ ನೆಲೆಸಿದೆ.
ಕೌಶಂಬಿ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳು
ಬುದ್ಧನೊಂದಿಗೆ ತಮ್ಮ ಹೆಸರನ್ನು ಹೊಂದಿಕೊಂಡಿರುವ ಹಲವು ಪ್ರಮುಖ ಸ್ಥಳಗಳು ಕೌಶಂಬಿಯಲ್ಲಿವೆ. ಕೌಶಂಬಿಯಲ್ಲಿ ನಡೆದ ಉತ್ಖನನದ ವೇಳೆ ಹಲವು ಪುರಾತನ ವಸ್ತುಗಳು, ಅಶೋಕ ಸ್ಥಂಭ ಹಾಗೂ ಗೋಸಿತಾರಾಮ ಸಮುದಾಯಗೃಹಗಳ ಅವಶೇಷಗಳು ಪತ್ತೆಯಾಗಿವೆ. ಘೋಶಿತ್ ರಾಮ್ ವಿಹಾರ್ ನಲ್ಲಿ ಬುದ್ಧ ತನ್ನ ಇಲ್ಲಿಯ ಭೇಟಿಯ ವೇಳೆ ತಂಗಿದ್ದನು. ಕೌಶಂಬಿ ಜೈನ ಭಕ್ತಾದಿಗಳನ್ನೂ ತನ್ನತ್ತ ಆಕರ್ಷಿಸುತ್ತಿದ್ದು ಇಲ್ಲಿನ ದಿಗಂಬರ ಜೈನ ಮಂದಿರದಲ್ಲಿ ಭಕ್ತರು ಪೂಜೆ ಸಲ್ಲಿಸಲು ಆಗಮಿಸುತ್ತಾರೆ. ಶೀತ್ಲಾ ದೇವಾಲಯ 1000 ಸಿ.ಇ ಗಳಷ್ಟು ಹಳೆಯದಾದ ದೇವಾಲಯವಾಗಿದ್ದು ಇದರ ಜೊತೆಗೆ ಕಮಸಿನ್ ದೇವಿ ಹಾಗೂ ದುರ್ಗಾ ದೇವಿ ದೇವಾಲಯಗಳೂ ಬಹಳಷ್ಟು ಸಂಖ್ಯೆಯ ಹಿಂದೂ ಭಕ್ತರನ್ನು ಆಕರ್ಷಿಸುತ್ತವೆ.
ಕೌಂಶಂಬಿ ತಲುಪುವುದು ಹೇಗೆ
ಕೌಶಂಬಿಯನ್ನು ವಾಯು, ರೈಲು ಹಾಗು ರಸ್ತೆ ಮಾರ್ಗಗಳ ಮೂಲಕ ತಲುಪಬಹುದು. ರಾಷ್ಟ್ರೀಯ ಹೆದ್ದಾರಿ 2 ಹಾಗೂ 27 ಕೌಶಂಬಿಯ ಮೂಲಕ ಹಾದು ಹೋಗುತ್ತಿದ್ದು ಅಲಾಹಾಬಾದ್ ಹಾಗೂ ವಾರಣಾಸಿ ಸೇರಿದಂತೆ ಉತ್ತರ ಪ್ರದೇಶದ ಇನ್ನಿತರ ಮಹತ್ವದ ನಗರಗಳ ಮೂಲಕ ಹಾದು ಹೋಗುತ್ತವೆ.
ಕೌಶಂಬಿ ಭೇಟಿಗೆ ಉತ್ತಮವಾದ ಋತುಮಾನ
ಉತ್ತರ ಪ್ರದೇಶದ ಇನ್ನಿತರ ನಗರಗಳಂತೆ ಕೌಶಂಬಿಯನ್ನು ತಲುಪಲು ಅತ್ಯುತ್ತಮವಾದ ಅವಧಿ ಎಂದರೆ ನವೆಂಬರ್ ನಿಂದ ಮಾರ್ಚ್ ತನಕದ ಅವಧಿ.