ಭ್ರಮರಿ ದೇವಿ ದೇವಾಲಯ ಮತ್ತು ಕೋಟೆ- ಕಾ-ಮಾಯಿ ಎಂದು ಕರೆಯಲ್ಪಡುವ ಕೋಟ್ ಭ್ರಮರಿ ದೇವಾಲಯ, ಬೆಟ್ಟದ ತುದಿಯಲ್ಲಿದ್ದು, ಕೌಸಾನಿಯಿಂದ 5 ಕಿ. ಮೀ ದೂರದಲ್ಲಿದೆ. ಜನಪ್ರಿಯ ಪುರಾಣದ ಪ್ರಕಾರ, ಪ್ರಸಿದ್ಧ ಭಾರತದ ಗುರು, ಆದಿ ಗುರು ಶಂಕರಾಚಾರ್ಯ ಗಡ್ವಾಲ ಪ್ರದೇಶಕ್ಕೆ ಪ್ರಯಾಣ ಮಾಡುತ್ತಿದ್ದಾಗ ಈ ಸ್ಥಳದಲ್ಲಿ ಉಳಿದುಕೊಂಡರು ಎಂದು ನಂಬಲಾಗಿದೆ.
ಪ್ರತಿ ಆಗಸ್ಟ್ ನಲ್ಲಿ, ನಂದಾ ಅಷ್ಟಮಿ ಅಥವಾ ನಂದಾ ರಾಜ್ ಜಾತ್ರೆಯನ್ನು ಇಲ್ಲಿ ಆಯೋಜಿಸಲಾಗುತ್ತದೆ ಮತ್ತು ಒಂದು ದೊಡ್ಡ ಮೆರವಣಿಗೆಯನ್ನೂ ಈ ಸಮಯದಲ್ಲಿ ನಡೆಸಲಾಗುತ್ತದೆ.