ಗಾಂಧಿ ಆಶ್ರಮ ಎಂದು ಜನಪ್ರಿಯವಾಗಿರುವ ಅನಶಕ್ತಿ ಆಶ್ರಮ, ಮಹಾತ್ಮ ಗಾಂಧಿಯವರ ಗೌರವಾರ್ಥವಾಗಿ ನಿರ್ಮಿಸಲಾಗಿದೆ. 'ರಾಷ್ಟ್ರಪಿತ', ಮಹಾತ್ಮ ಗಾಂಧಿ, 1929 ರಲ್ಲಿ ಈ ಆಶ್ರಮಕ್ಕೆ ಭೇಟಿ ನೀಡಿದ್ದರು. ಅವರು ಈ ಸ್ಥಳದಲ್ಲಿ, ನಿರ್ಲಿಪ್ತ ಯೋಗದ ಬಗ್ಗೆ ತಮ್ಮ ವ್ಯಾಖ್ಯಾನವನ್ನು ಬರೆದರು. ಗಾಂಧಿಯ ಜೀವನಕ್ಕೆ ಸಂಬಂಧಿಸಿದ ಹಲವಾರು ಪುಸ್ತಕಗಳು ಮತ್ತು ಛಾಯಾಚಿತ್ರಗಳು ಈ ಆಶ್ರಮದಲ್ಲಿವೆ.
ಸ್ಥಳವನ್ನು ಈಗ ಒಂದು ಅಧ್ಯಯನ ಹಾಗೂ ಸಂಶೋಧನಾ ಕೇಂದ್ರವಾಗಿ ಪರಿವರ್ತಿಸಲಾಗಿದೆ. ವಸತಿ ಮತ್ತು ಅಡುಗೆ ಮನೆಯ ಸೌಲಭ್ಯಗಳೂ ಕೂಡ ಇಲ್ಲಿ ದೊರೆಯುತ್ತವೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪ್ರಾರ್ಥನೆಯನ್ನು ನಡೆಸುವುದಕ್ಕಾಗಿ ಒಂದು ಪ್ರಾರ್ಥನಾ ಮಂದಿರವನ್ನು ಇಲ್ಲಿ ನಿರ್ಮಿಸಲಾಗಿದೆ.