ಕತುವಾ ಜಿಲ್ಲೆಯ ಕೃಷ್ಣ ನಗರದಲ್ಲಿರುವ ಸಪ್ತ ಸರೋವರ ಮಂದಿರವನ್ನು 1969 ರಲ್ಲಿ ಮಾಜಿ ಸಚಿವ ಭಗತ್ ಚಜ್ಜು ರಾಮ್ ಅವರು ಕಟ್ಟಿಸಿದ್ದಾರೆ. ದೇವಸ್ಥಾನಕ್ಕೆ ಭೂಮಿಯನ್ನು ಚೌಧರಿ ಹರಿಸಿಂಗ್ ಮತ್ತು ಚೌಧರಿ ದೇವಿದತ್ತಾ ಎಂಬುವವರು ದಾನರೂಪದಲ್ಲಿ ನೀಡಿದ್ದರು. ಸಪ್ತರ್ಷಿಗಳ ನೆನಪಿನಾರ್ಥವಾಗಿ ಈ ದೇವಸ್ತಾನಕ್ಕೆ ಈ ಹೆಸರನ್ನಿಡಲಾಗಿದೆ. ದೇವಸ್ಥಾನದ ಮಧ್ಯದಲ್ಲಿ ಪಾಠಶಾಲೆಯಿದೆ. ಹತ್ತಿರದಲ್ಲಿಯೇ ಧರ್ಮಶಾಲೆಯೂ ಕಟ್ಟಲ್ಪಡುತ್ತಿದೆ.