ಗೊವಿಂದ ಪೈ ಸ್ಮಾರಕವು ಒಂದು ಪಾರಂಪರಿಕ ಕಟ್ಟಡವಾಗಿದ್ದು, ಕನ್ನಡದ ಖ್ಯಾತ ಕವಿ ಗೋವಿಂದ ಪೈರವರ ಸ್ಮರಣಾರ್ಥವಾಗಿ ಅರ್ಪಿಸಲಾಗಿದೆ. ಕಾಸರಗೋಡು ಹಲವಾರು ಖ್ಯಾತನಾಮರಾದ ಕಲಾವಿದರಿಗೆ ಮತ್ತು ಕವಿಗಳಿಗೆ ಜನ್ಮ ನೀಡಿದೆ. ಅವರುಗಳಲ್ಲಿ ಐತಿಹಾಸಿಕವಾಗಿ ಮಹತ್ವವನ್ನು ಪಡೆದಿರುವವರು ಎಂದರೆ ಎಂ. ಗೋವಿಂದ ಪೈರವರು. ಇವರು ಕನ್ನಡ ಖ್ಯಾತ ಕವಿಗಳಲ್ಲಿ ಒಬ್ಬರು ಮತ್ತು ಮದ್ರಾಸ್ ಸರ್ಕಾರದಿಂದ " ಪೊಯೆಟ್ ಲಾರೆಟ್" ಎಂಬ ಬಿರುದನ್ನು ಪಡೆದವರು. ಅಲ್ಲದೆ " ರಾಷ್ಟ್ರಕವಿ " ಎಂದು ಸಹ ಹೆಸರುಗಳಿಸಿದ್ದಾರೆ. ಆಧುನಿಕ ಕವಿಗಳಲ್ಲಿ ಇವರು ಶ್ರೇಷ್ಠಾತಿಶ್ರೇಷ್ಠರೆಂಬ ಸ್ಥಾನವನ್ನು ಅಲಂಕರಿಸಿದ್ದಾರೆ.
ಈ ಸ್ಮಾರಕವನ್ನು ಗೋವಿಂದ ಪೈಯವರ ತವರೂರಾದ ಮಂಜೇಶ್ವರದಲ್ಲಿ ನಿರ್ಮಿಸಲಾಗಿದೆ. ಇದು ಸಾಹಿತ್ಯಾಸಕ್ತರು ಮತ್ತು ಪ್ರವಾಸಿಗರು ಇಬ್ಬರು ಭೇಟಿಕೊಡುವ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ.