ಸದಾಶಿವಗಡ ಬೆಟ್ಟದ ಕೋಟೆಯಲ್ಲಿರುವ 600 ವರ್ಷ ಹಳೆಯದಾದ ದುರ್ಗಾ ದೇವಸ್ಥಾನವು ಕಾರವಾರದ ಮತ್ತೊಂದು ಪ್ರಮುಖ ಯಾತ್ರಾ ಸ್ಥಳವಾಗಿದೆ. ಕಾಳಿ ನದಿಯ ಉತ್ತರ ಭಾಗಕ್ಕೆ ಸದಾಶಿವಗಡವಿದ್ದು ನಗರದಿಂದ 6 ಕಿ.ಮೀ ದೂರದಲ್ಲಿದೆ. ಸ್ಥಳೀಯ ನಂಬಿಕೆ ಪ್ರಕಾರ ರಾಜಾ ಛತ್ರಪತಿ ಶಿವಾಜಿಯು ಈ ಮಂದಿರವನ್ನು ಮೊದಲು ಖೋಜಿಸಿದ್ದು ನಂತರ ಭಂಡಾರಿ ಜನಾಂಗದವರಿಗೆ ಇಲ್ಲಿ ಪ್ರಾರ್ಥನೆ ಮಾಡಲು ಅವಕಾಶ ಮಾಡಿಕೊಟ್ಟನು. ಇದರ ಜೊತೆ ಇಲ್ಲಿ 17 ನೇ ಶತಮಾನದ ಪೀರ್ ಶಾನ್ ಶಮ್ಸುದ್ದಿನ್ ಖರೋಬತ್ ದರ್ಗಾದ ಹತ್ತಿರ ಸೊಂದ ರಾಜರುಗಳ ಕೋಟೆಯ ಅವಶೇಷಗಳನ್ನು ಕಾಣಬಹುದಾಗಿದೆ. ಇನ್ನು ಊಟ, ವಸತಿ ವಿಷಯಕ್ಕೆ ಸಂಬಂಧಪಟ್ಟಂತೆ, ಪ್ರವಾಸೊದ್ಯಮ ಇಲಾಖೆಯು ಯಾತ್ರಿ ನಿವಾಸವನ್ನು ನಿರ್ಮಾಣ ಮಾಡಿದೆ.