ಕಲಂಧರ್ ಶಾರವರ ಗೋರಿಯನ್ನು ದೆಹಲಿಯ ಚಕ್ರವರ್ತಿಯಾಗಿದ್ದ ಘಿಯಾಸ್- ಉದ್-ದಿನ್ರವರು ನಿರ್ಮಿಸಿದರು. ಇದನ್ನು ಸೂಫಿ ಸಂತ ಬೊ-ಅಲಿ-ಖ್ವಲಂದರ್ ಶಾರವರ ಸ್ಮರಣಾರ್ಥವಾಗಿ ನಿರ್ಮಿಸಲಾಯಿತು. ಇವರು ಈ ಪ್ರಾಂತ್ಯದಲ್ಲಿ ಜಾತಿ,ಮತ, ಧರ್ಮಗಳ ಭೇದವಿಲ್ಲದೆ ಆರಾಧಿಸಲ್ಪಡುತ್ತಿದ್ದ ಮಹಾನ್ ಸಂತರಾಗಿದ್ದರು. ಇವರ ಜೀವನ, ಪವಾಡಗಳು ಮತ್ತು ಬೋಧನೆಗಳು ಜನರ ಮನಸ್ಸಿನ ಮೇಲೆ ಆಳವಾದ ಪ್ರಭಾವಾಗಳನ್ನು ಬೀರಿದ್ದವು.
ಬೊ- ಅಲಿ- ಖ್ವಲಂಧರ್ ರವರು ಪಾಣಿಪತ್ನಲ್ಲಿನ ಬುದ್ಧ ಖೇಡದಲ್ಲಿ ಜನಿಸಿದರು. ದಂತ ಕತೆಗಳ ಪ್ರಕಾರ ಒಬ್ಬ ಫಕೀರ್ ತಾನು ಸಾಕಿದ್ದ ಭಯಾನಕ ಹುಲಿಯ ಜೊತೆಗೆ ಇವರನ್ನು ಭೇಟಿಯಾದನಂತೆ. ಆ ಫಕೀರ್ ಬೊ-ಅಲಿ-ಖಲಂಧರ್ ರವರಿಗೆ ಅತೀಂದ್ರಿಯ ಶಕ್ತಿಗಳಿಂದ ಮೋಡಿ ಮಾಡಿದನಂತೆ. ಅವನ ದೂರ್ತತೆಗೆ ರೋಸಿ ಹೋದರು ಸಹ ಬೊ-ಅಲಿಯವರು ತಮ್ಮ ಅತಿಥಿಗೆ ಒಂದು ಹಸುವನ್ನು ನೀಡಿದರಂತೆ, ಅದನ್ನು ಹುಲಿಯು ತಿಂದು ತೇಗಿತಂತೆ. ಆಗ ಅದರಿಂದಲು ತೃಪ್ತನಾಗದ ಅತಿಥಿಗೆ ಬೊ-ಅಲಿಯವರು ಒಂದು ಗೋಡೆಯನ್ನು ನಿರ್ಮಾಣ ಮಾಡಿ, ಅದರ ಭದ್ರತೆಯಲ್ಲಿ ತನ್ನ ಅತಿಥಿಯನ್ನು ನದಿಯ ದಂಡೆಯವರೆಗೆ ಕರೆದೊಯ್ದರಂತೆ.
ಇವರು ಮಾಡಿದ ಪವಾಡಗಳ ಬಗ್ಗೆ ಮತ್ತಷ್ಟು ದಂತ ಕತೆಗಳು ಚಾಲ್ತಿಯಲ್ಲಿವೆ. ಇವರು 724 ಹಿಜಿರಾ ಶಕೆಯಲ್ಲಿ ನಿಧನ ಹೊಂದಿದರು. ಇವರ ಗೋರಿಯನ್ನು ಪಾಣಿಪತ್ನ ಬುದ್ಧ ಖೇಡಾದಲ್ಲಿ ಮತ್ತು ಕರ್ನಾಲ್ನಲ್ಲಿ ಸಹ ನಿರ್ಮಿಸಲಾಗಿದೆ. ಕರ್ನಾಲ್ನಲ್ಲಿರುವ ಗೋರಿಯ ಸುತ್ತ ಗೋಡೆಯನ್ನು ನಿರ್ಮಿಸಲಾಗಿದೆ. ಇದು ಒಂದು ಮಸೀದಿ ಹಾಗು ನೀರಿನ ಕಾರಂಜಿಯನ್ನು ಹೊಂದಿದೆ.