ಪುರಾತನವಾದ ಕೊಂಡೇಶ್ವರ ದೇವಾಲಯವು ಕರ್ಜಾತ್ ವ್ಯಾಪ್ತಿಯಲ್ಲಿದ್ದು ಭಗವಾನ್ ಶಿವನಿಗೆ ಮೀಸಲಾದ ದೇವಾಲಯವಾಗಿದೆ. ಪವಿತ್ರವಾದ ಸಣ್ಣ ಸಣ್ಣ ಗೋಪುರ ದೇಗುಲಗಳನ್ನೂ ಇಲ್ಲಿ ದರ್ಶನ ಮಾಡಬಹುದು. ಈ ದೇವಾಲಯವನ್ನು ಪ್ರಸಿದ್ಧ ಹೇಮಂಡಪತಿ ವಾಸ್ತು ಶಿಲ್ಪದ ಶೈಲಿಯಲ್ಲಿ ಕಟ್ಟಲಾಗಿದೆ. ಈ ದೇವಾಲಯಕ್ಕೆ ಮಂಗಳಕರ ಸಮಯದಲ್ಲಿ, ವಿಶೇಷವಾಗಿ ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಹಾಗೂ ಪ್ರವಾಸಿಗರು ಭೇಟಿ ನೀಡುತ್ತಾರೆ. ಮಳೆಗಾಲದಲ್ಲಿ ಮಾತ್ರ ಈ ದೇವಾಲಯಕ್ಕೆ ಬರುವುದು ಕಷ್ಟ ಸಾಧ್ಯ. ಏಕೆಂದರೆ ದೇಗುಲದ ಸುತ್ತಲೂ ಇರುವ ಕಲ್ಲುಗಳು ಮಳೆಗಾಲದಲ್ಲಿ ಜಾರುವುದರಿಂದ ಪ್ರಯಾಣವು ಪ್ರಯಾಸ ಹಾಗೂ ಕಠಿಣವಾಗಬಹುದು.