ರಾಜಸ್ಥಾನದ ಕರೌಲಿ ಜಿಲ್ಲೆಯ ಸಪೋತಾರಾನಲ್ಲಿರುವ ರಮಥ್ರಾ ಕೋಟೆಯು ಭರತ್ಪುರಿನ ಕಿಯೋಲಾಡಿಯಿ ಘನಾ ಪಕ್ಷಿ ಧಾಮ ಮತ್ತು ಸವಾಯಿ ಮಾಧೋ ಪುರಿನ ಹುಲಿ ಸಂರಕ್ಷಿತ ಪ್ರದೇಶಗಳ ಮಧ್ಯೆ ಬರುತ್ತದೆ. ಇಲ್ಲಿಂದ ಕೆಲಾದೇವಿ ವನ್ಯಜೀವಿ ಧಾಮವು ಕೇವಲ 15 ಕಿ.ಮೀ ದೂರದಲ್ಲಿದೆ. ಈ ಕೋಟೆಯ ವಿಶೇಷವೆಂದರೆ, ಇಲ್ಲಿಂದ ಸರೋವರದ ಮತ್ತು ಪಟ್ಟಣದ ದೃಶ್ಯಗಳು ಅದ್ಭುತವಾಗಿ ಗೋಚರಿಸುತ್ತವೆ.ಈ ಕೋಟೆಯು, 1645 ರಲ್ಲಿ ಅಂದಿನ ಕರೌಲಿಯ ಮಹಾರಾಜನಾಗಿದ್ದ ಠಾಕೂರ್ ಭೋಜ್ ಪಾಲರಿಗೆ, ಅವರ ತಂದೆಯಿಂದ ಜಾಗಿರ್ ಅಥವಾ ಬಳುವಳಿಯಾಗಿ ದೊರೆತ್ತಿತ್ತು. ಇಂದು ಠಾಕೂರ್ ಬ್ರಿಜೇಂದ್ರ ಪಾಲ್ ಹಾಗು ಅವರ ಕುಟುಂಬದಿಂದ ಈ ಕೋಟೆಯು ನಿರ್ವಹಿಸಲ್ಪಡುತ್ತಿದೆ.ಈ ಕೋಟೆಯಲ್ಲಿ, ಶಿವ ಹಾಗು ಗಣೇಶನಿಗೆ ಅರ್ಪಿತವಾದ ಎರಡು ದೇವಸ್ಥಾನಗಳಿವೆ. ಶಿವನ ದೇವಸ್ಥಾನದಲ್ಲಿ ಮಾರ್ಬಲ್ಲಿನಿಂದ ರಚಿಸಲಾದ ಶಿವನ ವಿಗ್ರಹವಿದ್ದು, ಇದು 18 ನೇ ಶತಮಾನದ ಕುಶಲಕರ್ಮಿಗಳ ಕೌಶಲ್ಯತೆಯನ್ನು ತೋರ್ಪಡಿಸುತ್ತದೆ.ಈ ಕೋಟೆಗೆ ಹೋಗುವ ದಾರಿಯಲ್ಲಿ ಪ್ರವಾಸಿಗರಿಗೆ ಹಲವಾರು ಸುಂದರ ಹೊಲಗದ್ದೆಗಳು, ಪೊದೆಗಳು, ಕಾಲಿಸಿಲ್ ಸರೋವರ ಮತ್ತು ಅದರ ನೀರಾವರಿ ಕಾಲುವೆಗಳ ದೃಶ್ಯಗಳು ನೋಡಸಿಗುತ್ತವೆ. ಸರೋವರದಲ್ಲಿ ಕಾಣಸಿಗುವ ವಿವಿಧ ಪಕ್ಷಿಗಳು ಪಕ್ಕದ ಭರತ್ಪುರ್ ಪಕ್ಷಿ ಧಾಮದಿಂದ ಬಂದಿದ್ದು ಪ್ರವಾಸಿಗರು ವಿಕ್ಷಣೆಯ ಆನಂದವನ್ನು ಕಣ್ತುಂಬಿಕೊಳ್ಳಬಹುದು.